PLACE YOUR AD HERE AT LOWEST PRICE
ಬಂಗಾರಪೇಟೆ:ಉತ್ತಮ ಪ್ರಜಾಕೀಯ ಪಕ್ಷದ ಅಧ್ಯಕ್ಷ ಹಾಗೂ ಚಿತ್ರ ನಟ ಉಪೇಂದ್ರ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವಾಗ ದಲಿತರ ಮೇಲೆ ಉದ್ದೇಶಪೂರ್ವಕವಾಗಿ ಅವಹೇಳನ ಪದವನ್ನು ಬಳಿಸಿರುವುದನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು.
ಮುಖಂಡ ಹೂವರಸನಹಳ್ಳಿ ರಾಜಪ್ಪ ಮಾತನಾಡಿ, ನಟ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಊರು ಎಂದ ಮೇಲೆ ಹೊಲಗೇರಿ ಇರಲೇಬೇಕು. ಆ ಹೊಲಗೇರಿಯಲ್ಲಿ ಹೊಲಗೇರಿಗೆ ಸಂಬಂಧಪಟ್ಟ ಜನರು ಇರಲೇಬೇಕು ಎಂದು ಜಾತಿ ನಿಂದನೆ ಮಾಡಿ ಮಾತನಾಡಿರುವುದು ಖಂಡನಿಯ ಎಂದರು.
ನಟ ಉಪೇಂದ್ರ ದಲಿತ ವಿರೋಧಿಯಾಗಿ ಮಾತನಾಡಿರುವುದನ್ನು ಬಂಗಾರಪೇಟೆ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ಖಂಡಿಸುತ್ತದೆ. ಉಪೇಂದ್ರನನ್ನು ಈ ಕೂಡಲೇ ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡಿ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಐಯ್ಯಪ್ಪಲ್ಲಿ ನಾರಾಯಣಸ್ವಾಮಿ, ಸೂಲಿಕುಂಟೆ ಆನಂದ್, ಸೂಲಿಕುಂಟೆ ರಮೇಶ್, ಹುಣಸನಹಳ್ಳಿ ವೆಂಕಟೇಶ್, ಕೆ.ಮದಿವಣ್, ರಘುನಾಥ್, ರಾಮಪ್ಪ, ನವೀನ್ ಕುಮಾರ್, ಕಲಾವಿದ ಯಲ್ಲಪ್ಪ,ಕಲಾವಿದ ರವಿಚಂದ್ರ, ಮಾರುತಿ ಪ್ರಸಾದ್, ಲಕ್ಷ್ಮಯ್ಯ, ಅಯ್ಯಪ್ಪ, ಕರುಣಾ ಇನ್ನು ಮೊದಲಾದವರು ಇದ್ದರು.