PLACE YOUR AD HERE AT LOWEST PRICE
ಕೆಜಿಎಫ್:ಪರಿಶಿಷ್ಟ ಸಮುದಾಯದ ಸ್ಮಶಾನಕ್ಕೆ ಗ್ರಾಮಸ್ಥರು ತೆರಳಲು ಸೂಕ್ತ ರಸ್ತೆ ಇಲ್ಲದೇ ಪರದಾಟು ಪಡುತ್ತಿದವರಿಗೆ ಕಂದಾಯ ಇಲಾಖೆ ಹಾಗೂ ಸವೇ ಇಲಾಖೆಯ ಅಧಿಕಾರಿಗಳು ಸರ್ವೇ ನಡೆಸಿ ನಕಾಶೆ ರಸ್ತೆಯನ್ನು ಗುರುತಿಸಿ ಒತ್ತುವರಿಯನ್ನು ತೆರುವು ಗೊಳಿಸಿದ್ದಾರೆ.
ತಾಲ್ಲೂಕಿನ ಕಂಗಾಂಡ್ಲಹಳ್ಳಿ ಗ್ರಾಪಂಯ ತೊಂಗಲಕುಪ್ಪ ಗ್ರಾಮದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸ್ಮಶಾನಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲವೆಂದು ಗ್ರಾಮದ ಗ್ರಾಪಂ ಸದಸ್ಯ ಶ್ರೀನಿವಾಸ್ ನಾಯ್ಡು ನೇತೃತ್ವದಲ್ಲಿ ಗ್ರಾಮಸ್ಥರು ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದ ಹಿನ್ನಲೆ ಕಂದಾಯ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಇಂದು ಸರ್ವೇ ಮಾಡಿದರು.
ತೊಂಗಲಕುಪ್ಪ ಗ್ರಾಮದಲ್ಲಿ ಸ್ಮಶಾನಕ್ಕೆ ಹಲವು ವರ್ಷಗಳಿಂದ ರಸ್ತೆ ಇಲ್ಲದೆ, ಜಮೀನುಗಳಲ್ಲಿಯೇ ತೆರಳಿ ಮೃತ ವ್ಯಕ್ತಿಯನ್ನು ಅತ್ಯ ಸಂಸ್ಕಾರ ಮಾಡಬೇಕಿತ್ತು, ಈ ಸಂಬಂಧವಾಗಿಯೇ ಹಲವು ಭಾರಿ ಗಲಾಟೆಗಳು ಸಹ ನಡೆದಿದ್ದವು.
ಗ್ರಾಪಂ ಸದಸ್ಯ ಶ್ರೀನಿವಾಸ್ ನಾಯ್ಡು ಹಾಗೂ ಗ್ರಾಮಸ್ಥರ ಮನವಿಗೆ ಸ್ವಂದಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ವೇ ಇಲಾಖೆಯ ಅಧಿಕಾರಿ ಮೌಲಾಖಾನ್ ಸರ್ವೇ ನಡೆಸಿ ನಕಾಶೆ ರಸ್ತೆಯನ್ನು ಗುರುತಿಸಿ ಒತ್ತುವರಿದಾರರಿಂದ ತೆರುವುಗೊಳಿಸುವ ಮೂಲಕ ಸಮಸ್ಯೆಗೆ ಮುಕ್ತಿ ನೀಡಿದರು.