PLACE YOUR AD HERE AT LOWEST PRICE
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದಲೆ ಪತ್ನಿಯ ಬರ್ಭರ ಕೊಲೆ ನಡೆದಿದೆ.
ಮಚ್ಚಿನಿಂದ ಕೊಚ್ವಿ ಮೊದಲ ಪತ್ನಿಯ ಬರ್ಬರ ಹತ್ಯೆ ಮಾಡಿ, ಅತ್ತೆ, ಮಾವ ನಾದಿನಿ ಮೇಲೂ ಹಲ್ಲೆ ಮಾಡಿರುವ ಅರೋಪಿ ನಾಗೇಶ್ ತನ್ನ ಪತ್ನಿಯನ್ನು ಮಚ್ಚಿನಿಂದ ಕೊಚ್ವಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕಳೆದ 7 ವರ್ಷಗಳಿಂದ ಕೌಟುಂಬಿಕ ಕಲಹ ನಡೆಯುತಿತ್ತು ಎನ್ನಲಾಗಿದ್ದು ಮೃತ ರಾಧರವರು ಜೀವನಕ್ಕಾಗಿ ಟೈಲರ್ ಕೆಲಸದ ಜೊತೆ ಅಂಗಡಿ ಹಾಕಿಕೊಂಡಿದ್ದರು. ಇಂದು ಏಕಾಏಕಿ ಅಂಗಡಿಯಲ್ಲಿದ್ದ ಪತ್ನಿ ಮೇಲೆ ಪತಿ ನಾಗೇಶ್ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಅಡ್ಡ ಹೋದ ಮಾವ ಮುನಿಯಪ್ಪ ಮೇಲೂ ದಾಳಿ ಮಾಡಿದ್ದಾನೆ. ಗಾಯಾಳು ಮುನಿಯಪ್ಪ, ಅತ್ತೆ ಹಾಗೂ ನಾದಿನಿರನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಡಿವೈಎಸ್ ಪಿ ನಂದಕುಮಾರ್ ಭೇಟಿ ನೀಡಿದ್ದರು. ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.