PLACE YOUR AD HERE AT LOWEST PRICE
ಬಂಗಾರಪೇಟೆ:ವಾತಾವರಣದಲ್ಲಿ ಉತ್ತಮ ಸಸಿಗಳನ್ನು ಬೆಳೆಸುವ ಮುಖಾಂತರ ಸಸ್ಯ ಶ್ಯಾಮಲಾವಾಗಿ ಮಾಡಿಮುಂದಿ ಪೀಳಿಗೆಗೆ ಮರಗಳನ್ನು ಬೆಳೆಸಿದಾಗ ಉತ್ತಮ ಮಳೆ, ಗಾಳಿ ಬರುತ್ತದೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಹುದುಕುಳ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಸಾಕ್ಷರತೆ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ವಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಸ್ಯ ಶ್ಯಾಮಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿ. ಅರಣ್ಯ ಇಲಾಖೆದಿಂದ ನಿಮಗೆ ಯಾವ ಗಿಡ ಬೇಕಾದರೂ ನೀಡುತ್ತೇವೆ, ಗಿಡಗಳನ್ನು ಬೆಳೆಸಿದರೆ ನಿಮ್ಮ ಶಾಲೆಯ ವಾತಾವರಣ ಅಚ್ಚಹಸಿರಾಗಿ ಇರುತ್ತದೆ. ಉತ್ತಮ ಗಾಳಿ ಬೆಳಕು ಸಿಗುತ್ತದೆ ಎಂದರು.
ಈ ವರ್ಷ ಮಳೆ ಇಲ್ಲದೆ ಬೆಳೆಗಳೆಲ್ಲವೂ ಒಣಗುತ್ತಿದೆ. ಅದಕ್ಕಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಸಹ ಸಸಿಗಳನ್ನು ಬೆಳೆಸಿ ಮುಂದಿನ ದಿನಗಳಲ್ಲಿ ಉತ್ತಮ ಮಳೆ, ಬೆಳೆ,ಗಾಳಿ ಸಿಗಲಿ. ಇವತ್ತು ಪರಿಸರದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ಮಾಲಿನ್ಯವನ್ನು ಓಗಲಾಡಿಸಬೇಕಿದೆ. ಪ್ರತಿಯೊಬ್ಬರೂ ತಮ್ಮ ತೋಟ ಹಾಗೂ ಮನೆ ಅಂಗಳದಲ್ಲಿ ಒಂದೊಂದು ಗಿಡವನ್ನು ನೆಟ್ಟು ನಿಮ್ಮ ಮನೆಯಲ್ಲಿ ವ್ಯರ್ಥವಾಗುವ ನೀರನ್ನು ಆ ಗಿಡಗಳಿಗೆ ಹಾಕಿ ಬೆಳೆಸಿ ಎಂದರು.
ಸರ್ಕಾರದಿಂದ ಪಠ್ಯ ಪುಸ್ತಕ, ಶೂ, ಕ್ಷೀರ ಭಾಗ್ಯ, ಬಿಸಿಯೂಟ, ಪ್ರತಿಯೊಂದು ಉಚಿತವಾಗಿ ನೀಡುತ್ತಿದ್ದೇವೆ ಆದರೂ ಸಹ ಪೋಷಕರು ಆಂಗ್ಲ ಮಾಧ್ಯಮ ವ್ಯಾಮೋಹಕ್ಕೆ ಸಿಲುಕಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಸಾವಿತ್ರಿ, ಅರಣ್ಯ ರಕ್ಷಕ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ, ಬಿ ಆರ್ ಸಿ ಶಶಿಕಲಾ, ಶಾಲೆಯ ಮುಖ್ಯೋಪಾಧ್ಯಾಯರಾದ ಸರೋಜಮ್ಮ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಹರೀಶ್ ಕುಮಾರ್, ಶಿಕ್ಷಕರಾದ ಮಮತಾ ಹಾಗೂ ಮೊದಲಾದವರು ಇದ್ದರು.