• Tue. Apr 30th, 2024

PLACE YOUR AD HERE AT LOWEST PRICE

ಕೆಜಿಎಫ್:ಕ್ಷೇತ್ರದ ಜನತೆಯ ಸೇವೆ ಮಾಡಲು ಬಂದಿದ್ದೀನಿ. ನಿರಂತರವಾಗಿ ಕೈಲಾದಷ್ಟು ಸಮಾಜ ಸೇವೆಯನ್ನು ಮುಂದುವರಿಸಿಕೊಂಡು ಹೋಗೋಣ, ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡೋಣ ಎಂದು ಆರ್.ಕೆ.ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಮಾಜ ಸೇವಕ ವಿ.ಮೋಹನ್ ಕೃಷ್ಣ ಹೇಳಿದರು.

ಅವರು ರಾಮಸಾಗರ ಗ್ರಾಪಂಯ ಮಹದೇವಪುರ ಗ್ರಾಮದ ತಮ್ಮ ನಿವಾಸದಲ್ಲಿ ಕ್ಷೇತ್ರದ ತಮ್ಮ ಬೆಂಬಲಿಗರಿಗೆ ದೀಪಾವಳಿ ಹಬ್ಬಕ್ಕೆ ಪಟಾಕಿ ಬಾಕ್ಸ್ ಹಾಗೂ ಸಿಹಿ ವಿತರಿಸಿ ಮಾತನಾಡಿ, ಕೆಜಿಎಫ್ ಕ್ಷೇತ್ರದಲ್ಲಿ ತಾವು ಹುಟ್ಟಿ ಬೆಳೆದಿದ್ದು, ನಿರಂತರವಾಗಿ ತಮ್ಮ ಕೈಲಾದಷ್ಟು ಜನರ ಸೇವೆ ಮಾಡುವುದಾಗಿ, ಈ ವರ್ಷವು ಸಹ ಓಂ ಶಕ್ತಿ ಹಾಗೂ ಅಯ್ಯಪ್ಪ ಸ್ವಾಮಿಯ ಭಕ್ತರಿಗೂ ಉಚಿತ ಬಸ್ ವ್ಯವಸ್ಥೆ ಮಾಡುತ್ತೇನೆ ಎಂದರು.

ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕ್ಷೇತ್ರದಲ್ಲಿ ಅನೇಕರು ಸಮಾಜ ಸೇವಕರು ಗ್ರಾಮಗಳಲ್ಲಿ ಓಡಾಟ ನಡೆಸುತ್ತಿದ್ದರು. ಅದರೆ ಚುನಾವಣೆ ಮುಗಿದ ನಂತರ ಯಾರು ಸಹ ಜನರ ಕಡೆಗೆ ಮುಖ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ನೀಡಿದರು.

ಇದೇ ವೇಳೆ ಕ್ಷೇತ್ರದ ಜನತೆಗೆ ಶಾಸಕಿ ರೂಪಕಲಾ ಶಶಿಧರ್ ಯುಗಾಧಿ ಹಬ್ಬದಲ್ಲಿ ಮಾತ್ರ ಬಡವರು ಕಾಣಿಸಿಕೊಂಡು ದಿನಸಿ ಕಿಟ್ ವಿತರಣೆ ಮಾಡಿದರು. ಅದರೆ ದೀಪಾವಳಿ ಹಬ್ಬದಲ್ಲಿ ಯಾರು ಬಡವರು ಕಾಣಿಸಲಿಲ್ವ ಎಂದು ಬಿಜೆಪಿ ಪಕ್ಷದ ಕೆಜಿಎಫ್ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಹೇಮಾರೆಡ್ಡಿ ಪ್ರಶ್ನೆ ಮಾಡಿದರು.

ಶಾಸಕರು ಕೇವಲ ಚುನಾವಣೆಗೆ ಮಾತ್ರ ದಿನಸಿ ಕಿಟ್, ಉಚಿತ ಬಸ್ ನೀಡುವುದು ಅಲ್ಲ ಮುಂದಿನ ದಿನಗಳಲ್ಲಿಯೂ ಸಹ ಅದೇ ರೀತಿಯಲ್ಲಿ ಉಚಿತ ಬಸ್ ನೀಡುವ ಮೂಲಕ ತಮ್ಮ ಶಕ್ತಿ ಏನು ಎಂಬುದನ್ನು ಸಾಬೀತುಪಡಿಸಲಿ ಎಂದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿರೆಡ್ಡಿ, ಮುಖಂಡರಾದ ಅಶ್ವಥ್ ನಾಯ್ಡು, ಬಾಬು ರೆಡ್ಡಿ, ಕಾರಿ ಮಂಜುನಾಥ್, ಮೋಹನ್, ಲಕ್ಷ್ಮಪ್ಪ, ವೆಂಕಟರಾಮೇಗೌಡ, ಅಭಿಲಾಷ್ ರೆಡ್ಡಿ, ಕೃಷ್ಣಪ್ಪ, ಗಂಗಿರೆಡ್ಡಿ, ತೇಜು, ಸುಧಾಕರ್ ರೆಡ್ಡಿ, ಪ್ರವೀಣ್ ರೆಡ್ಡಿ, ಶಿವ ಸೇರಿದಂತೆ ಬೆಂಬಲಿಗರು ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!