• Thu. May 16th, 2024

PLACE YOUR AD HERE AT LOWEST PRICE

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ ಫ್ಯಾಕ್ಟ್-ಚೆಕ್ ಯುನಿಟ್ 9 ಯೂಟ್ಯೂಬ್ ಚಾನೆಲ್‌ಗಳು ಹರಡಿರುವ ಸುಳ್ಳು ಮಾಹಿತಿಯನ್ನು ಬಯಲು ಮಾಡಿದೆ.

ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ಯೂಟ್ಯೂಬ್ ಚಾನೆಲ್‌ಗಳು 83 ಲಕ್ಷ ಚಂದಾದಾರರನ್ನು ಹೊಂದಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಚಾನೆಲ್‌ಗಳು ಭಾರತದ ಮುಖ್ಯ ನ್ಯಾಯಮೂರ್ತಿ, ಪ್ರಧಾನ ಮಂತ್ರಿ ಮತ್ತು ಮುಖ್ಯ ಚುನಾವಣಾ ಆಯುಕ್ತರು ಸೇರಿದಂತೆ ಸಾಂವಿಧಾನಿಕ ಹುದ್ದೆಗಳಲ್ಲಿರುವ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂಗಳು) ನಿಷೇಧಿಸಲಾಗಿದೆ ಮತ್ತು ಕೇಂದ್ರ ಸಚಿವರ ರಾಜೀನಾಮೆ ಅಥವಾ ಸಾವಿನ ಬಗ್ಗೆ ಕೆಲವು ಚಾನೆಲ್‌ಗಳು ತಪ್ಪಾಗಿ ಹೇಳಿಕೊಂಡಿವೆ ಎಂದು  ಫ್ಯಾಕ್ಟ್-ಚೆಕ್ ಯುನಿಟ್ ಹೇಳಿಕೊಂಡಿದೆ.

ಸುಳ್ಳು ಸುದ್ದಿ ಹರಡುತ್ತಿದೆ ಎಂದು ಪಟ್ಟಿ ಮಾಡಲಾದ ಯುಟ್ಯೂಬ್‌ ಚಾನಲ್‌ಗಳು:

ಬಜರಂಗ್ ಎಜುಕೇಶನ್  (Bajrang Education) (24.3 ಲಕ್ಷ ಚಂದಾದಾರರನ್ನು ಹೊಂದಿದೆ), ಆಪ್ಕೆ ಗುರೂಜಿ(Aapke Guruji) (34.7 ಲಕ್ಷ ಚಂದಾದಾರರನ್ನು ಹೊಂದಿದೆ), ಬಿಜೆ ನ್ಯೂಸ್ (Bj News) (5.29 ಲಕ್ಷ ಚಂದಾದಾರರನ್ನು ಹೊಂದಿದೆ), ಸಂಸಾನಿ ಲೈವ್ ಟಿವಿ ( Sansani Live TV) (4.33 ಲಕ್ಷ ಚಂದಾದಾರರನ್ನು ಹೊಂದಿದೆ), ಜಿವಿಟಿ ನ್ಯೂಸ್( GVT News ) (8.16 ಲಕ್ಷ ಚಂದಾದಾರರನ್ನು ಹೊಂದಿದೆ), ಡೈಲಿ ಸ್ಟಡಿ ( Daily Study) (3.35 ಲಕ್ಷ ಚಂದಾದಾರನ್ನು ಹೊಂದಿದೆ), ಭಾರತ್ ಏಕ್ತಾ ನ್ಯೂಸ್(Bharat Ekta News ) (11,700 ಚಂದಾದಾರರನ್ನು ಹೊಂದಿದೆ), ಅಬ್ ಬೋಲೆಗಾ ಭಾರತ್(Ab Bolega Bharat) (1.78 ಲಕ್ಷ ಚಂದಾದಾರರನ್ನು ಹೊಂದಿದೆ) ಮತ್ತು ಸರ್ಕಾರಿ ಯೋಜನೆ ಅಧಿಕೃತ(Sarkari Yojana Official ) (1 ಲಕ್ಷ ಚಂದಾದಾರನ್ನು ಹೊಂದಿದೆ).

ಈ ಚಾನೆಲ್‌ಗಳಲ್ಲಿನ ನಕಲಿ ವಿಷಯಗಳಲ್ಲಿ ಹೆಚ್ಚಿನವು ಹಿಂದಿಯಲ್ಲಿದೆ. ಆದ್ದರಿಂದ ಇದನ್ನು ಭಾರತದಿಂದ ಸೃಷ್ಟಿಸಿರುವ  ಹೆಚ್ಚಿನ ಸಾಧ್ಯತೆಗಳಿವೆ ಎಂದು  ವರದಿ ತಿಳಿಸಿದೆ. ಇತ್ತೀಚೆಗೆ 2021ರ ಮಾಹಿತಿ ತಂತ್ರಜ್ಞಾನ ಇಲಾಖೆ ನಿಯಮಗಳ ಅಡಿಯಲ್ಲಿ ತುರ್ತಾಗಿ ಸರ್ಕಾರವು ಹಲವಾರು YouTube ಚಾನಲ್‌ಗಳನ್ನು ಬ್ಲಾಕ್‌ ಮಾಡಿತ್ತು. YouTube ಚಾನಲ್‌ಗಳು ಹರಡುವ ನಕಲಿ ಸುದ್ದಿಗಳ ಬಗ್ಗೆ ಮತ್ತು ಟ್ರಾಫಿಕ್‌ ಹೆಚ್ಚಿಸಲು ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಬಗ್ಗೆ ಫ್ಯಾಕ್ಟ್-ಚೆಕ್ ಯುನಿಟ್ ನಿಗಾ ವಹಿಸುತ್ತಿದೆ.

ಈ ಹಿಂದೆ 2022ರ ಡಿಸೆಂಬರ್‌ನಿಂದ ಸುಳ್ಳು ಮಾಹಿತಿಯನ್ನು ಪ್ರಕಟಿಸಿದ ಆರೋಪದ ಮೇಲೆ 26 YouTube ಚಾನಲ್‌ಗಳ ಹೆಸರನ್ನು PIB ಬಹಿರಂಗಪಡಿಸಿತ್ತು. 2021ರ IT ನಿಯಮಗಳಡಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು 120ಕ್ಕೂ ಹೆಚ್ಚು YouTube ಚಾನಲ್‌ಗಳನ್ನು ಬ್ಲಾಕ್‌ ಮಾಡಿತ್ತು.

 

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!