PLACE YOUR AD HERE AT LOWEST PRICE
ಲೋಕಸಭಾ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಸಂಸತ್ತಿನ ಒಳಗೆ ಇಬ್ಬರು ಆಗಂತುಕರು ಪ್ರವೇಶಿಸಿ ಬಣ್ಣದ ಅನಿಲ ( ಕಲರ್ ಗ್ಯಾಸ್ ) ಸಿಡಿಸಿರುವ ಆತಂಕಕಾರಿ ಘಟನೆ ಇಂದು ನಡೆದಿದೆ.
ಸಂಸತ್ತಿನ ಮೇಲೆ ದಾಳಿ ನಡೆದ 22 ವರ್ಷಗಳ ನಂತರದ ದಿನವೇ ಈ ಆತಂಕದ ಘಟನೆ ನಡೆದಿದೆ. ಸಂಸತ್ ಆವರಣವನ್ನು ನಾಲ್ಕು ಆಗಂತುಕರು ಪ್ರವೇಶಿಸಿದ್ದರು.
ಮೊದಲ ವರದಿಯಂತೆ, ಮೈಸೂರು ಸಂಸದ ಪ್ರತಾಪ ಸಿಂಹ ಅವರ ಕಚೇರಿಯ ಮೂಲಕ ಸಂದರ್ಶಕರ ರಹದಾರಿ ಪತ್ರ ( ವಿಸಿಟರ್ ಪಾಸ್ ) ವನ್ನು ಪಡೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.