PLACE YOUR AD HERE AT LOWEST PRICE
ಬಂಗಾರಪೇಟೆ: ನೀರಿನ ಮಿತ ಬಳಕೆ, ಕಸ ವಿಲೇವಾರಿ, ಕಂದಾಯ ವಸೂಲಾತಿ, ಹೆಣ್ಣು ಭ್ರೂಣ ಹತ್ಯೆ, ಪ್ಲಾಸ್ಟಿಕ್ ನಿಷೇಧ ಹಾಗೂ ಕೋವಿಡ್ ಕುರಿತು ಮುನ್ನಚರಿಕೆ ಕ್ರಮಗಳಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಮೀನಾಕ್ಷಿ ತಿಳಿಸಿದರು.
ಪುರಸಭೆ ಕಾರ್ಯಲಯ ಹಾಗೂ ಫೋಕಸ್ ಸಂಸ್ಥೆಯ ಸಹಯೋಗದಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಹಮ್ಮಿಕೊಂಡಿದ್ದ ಜನಜಾಗೃತಿ ಬೀದಿ ನಾಟಕವನ್ನು ತಮಟೆ ಭಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿರ ಮಾರ್ಗದರ್ಶನದಲ್ಲಿ ಹೆಣ್ಣುಭ್ರೂಣ ಹತ್ಯೆ, ಪ್ಲಾಸ್ಟಿಕ್ ನಿಷೇಧ, ನೀರು ಮತ್ತು ನೈರ್ಮಲ್ಯ ಕುರಿತಾದ ಜಾಗೃತಿ ಹಾಗೂ ಕಡ್ಡಾಯವಾಗಿ ಕಂದಾಯ ಪಾವತಿಸುವ ಬಗ್ಗೆ ಮತ್ತು ಇತ್ತಿಚೆಗೆ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಮುನ್ನಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು.
ನೀರನ್ನು ಮಿತವಾಗಿ ಬಳಸಬೇಕು, ಕಸ ವಿಲೇವಾರಿ ವಾಹನಗಳು ತಮ್ಮ ಮನೆಗಳ ಬಳಿ ಬಂದಾಗ ಒಣ ಕಸ, ಹಸಿ ಕಸವನ್ನು ಬೇರ್ಪಡಿಸಿ ನೀಡಬೇಕು, ಹಾಗೂ ಪಟ್ಟಣದ ಸ್ವಚ್ಛತೆಯನ್ನು ಕಾಪಾಡಬೇಕೆಂದು ಕೋರಿದರು.
ಫೋಕಸ್ ಕಲಾ ತಂಡದ ಮೂಲಕ ೨ದಿನಗಳ ಕಾಲ ಪಟ್ಟಣದ ಮುಖ್ಯ ಸ್ಥಳಗಳಲ್ಲಿ ಕಲಾವಿದರು ಹಾಡುಗಳು ಹಾಡುತ್ತಾ, ಬೀದಿ ನಾಟಕಗಳ ಮುಖಾಂತರ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಪ್ರಶಾಂತ್, ಪರಿಸರ ಅಭಯಂತರ ಮಹೇಶ್, ರಫೀಕ್, ಮಹೇಶ್, ಆರೋಗ್ಯಧಿಕಾರಿ ಗೋವಿಂದರಾಜು, ಮದನ್ಕುಮಾರ್, ಫೋಕಸ್ ಸಂಸ್ಥೆ ನಿರ್ದೇಶಕ ಅ.ನಾ.ಹರೀಶ್, ಪ್ರಾಂಶುಪಾಲ ಸುಬ್ರಮಣಿ, ಕಲಾವಿದರಾದ ದೊಡ್ಡಮಲ್ಲೆ ರವಿ, ಕಲಾವಿದ ಯಲ್ಲಪ್ಪ, ಮಾರ್ಜೇನಹಳ್ಳಿ ಮುನಿಸ್ವಾಮಿ, ನಾಗಪ್ಪ ಮೊದಲಾದವರಿದ್ದರು.