PLACE YOUR AD HERE AT LOWEST PRICE
ಬಂಗಾರಪೇಟೆ:ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಪ್ರತಿ ಅರ್ಹರಿಗೆ ದೊರೆಯಬೇಕು ಎಂಬ ಸದುದ್ದೇಶದಿಂದ ಸರ್ಕಾರ ಅನೇಕ ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೂದಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ಮಂಜುನಾಥ್ ಮನವಿ ಮಾಡಿದರು.
ಅವರು ಬೂದಿಕೋಟೆಯ ನಾಡ ಕಛೇರಿಯಲ್ಲಿ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಫವತಿ ಖಾತೆ ಆಂದೋಲನ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿ, ಕುಟುಂಬದ ಹಿರಿಯರು ತೀರಿಕೊಂಡ ನಂತರ ಅವರ ಮಕ್ಕಳು, ಮೊಮ್ಮೊಕ್ಕಳು ಮತ್ತು ವಾರಸರಿಗೆ ಖಾಲೆ ಬದಲಾವಣೆ ಮಾಡಿಕೊಳ್ಳಲು ಅನೇಕ ಸಮಸ್ಯೆಗಳಿತ್ತು.
ಈ ಸಮಸ್ಯಯು ವರ್ಷಾನುಗಟ್ಟಲೆ ಮುಂದುವರೆದುಕೊಂಡು ಬರುತ್ತಿದ್ದು ಸರ್ಕಾರಿ ಸೌಲಭ್ಯ ಪಡೆಯಲಾಗದೆ ಜನ ತುಂಬಾ ಸಂಕಷ್ಟಕ್ಕೆ ಸಿಕ್ಕಿರುವುದನ್ನು ಮನಗಂಡ ಸರ್ಕಾರ ಫವತಿ ಖಾತೆ ಆಂದೋಲನ ಯೋಜನೆಯನ್ನು ಜಾರಿಗೆ ತಂದಿರುವುದು ತುಂಬಾ ಅನುಕೂಲಕರವಾಗಿದೆ ಎಂದು ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಯಾರೆಲ್ಲಾ ಫವತಿ ವಾರಸು ಖಾತೆ ಬದಲಾವಣೆ ವಿಷಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದೀರೋ ಅಂತಹವರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಯೋಜನೆಯ ಬಗ್ಗೆ ಇನ್ನೂ ಹೆಚ್ಚು ಹೆಚ್ಚಾಗಿ ಜನತೆಗೆ ತಿಳುವಳಿಕೆ ಮೂಡಿಸಿದರೆ ಸಮಸ್ಯೆ ಇರುವ ಎಲ್ಲರೂ ಬಂದು ಅರ್ಜಿ ನೀಡಿ ಅನುಕೂಲ ಪಡೆಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಬೂದಿಕೋಟೆ ಗ್ರಾಮ ಲೆಕ್ಕಾಧಿಕಾರಿ ವಿನೋದ್, ಇತರೆ ವೃತ್ತಗಳ ಗ್ರಾಮ ಲೆಕ್ಕಾಧಿಕಾರಿಗಳಾದ ಮಹೇಶ್, ಅಮರೇಶ್ ಮೊದಲಾದವರಿದ್ದರು.