PLACE YOUR AD HERE AT LOWEST PRICE
ಬಂಗಾರಪೇಟೆ:ರೆಡ್ಡಿ ಜನಾಂಗ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಸಮುದಾಯದ ಆಶಯದಂತೆ ಸಮಾಜದಲ್ಲಿ ನಡೆದುಕೊಳ್ಳುತ್ತೇನೆ ಎಂದು ನೂತನವಾಗಿ ರೆಡ್ಡಿ ಜನ ಸಂಘದ ರಾಜ್ಯ ನಿರ್ಧೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿರುವ ಕೆ.ಚಂದ್ರಾರೆಡ್ಡಿ ಹೇಳಿದರು.
ಪಟ್ಟಣದ ಕೋಲಾರ ರಸ್ತೆಯಲ್ಲಿನ ಕೆ.ಸಿ.ಆರ್ ಕಛೇರಿಯಲ್ಲಿ ತಾಲ್ಲೂಕು ಕೃಷಿಕ ಸಮಾಜ ಮತ್ತು ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ತಾಲ್ಲೂಕಿನ ರೆಡ್ಡಿ ಜನಾಂಗ ನನ್ನಮೇಲೆ ಅಭಿಮಾನವಿಟ್ಟು ನನ್ನ ಅವಿರೋಧ ಆಯ್ಕೆಗೆ ಸಹಕಾರ ನೀಡಿದ್ದಾರೆ.
ಜನಾಂಗದ ಅಭೀವೃದ್ಧಿಗೆ ನಾನು ಪ್ರಥಮ ಆದ್ಯತೆಯನ್ನು ನೀಡುತ್ತೇನೆ. ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ ನಿರ್ಧೇಶಕರು ಹಾಗೂ ಕೋಲಾರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ವಡಗೂರು ಡಿ.ಎಲ್.ನಾಗರಾಜ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಜಿ.ರಾಜಾರೆಡ್ಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ವಿ.ಮಹೇಶ್, ಪತ್ರಕರ್ತ ವಿ.ಶಿವಾರೆಡ್ಡಿ, ಡಿ.ಕೆ ಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಧಮ್ಮ, ಹಿರಿಯ ವಕೀಲ ಅಮರೇಶ್, ಮುಖಂಡರಾದ ಒಂಬತ್ತುಗುಳಿ ವೆಂಕಟೃಏಶರೆಡ್ಡಿ, ಪುರಸಭಾ ಸದಸ್ಯರಾದ ವಸಂತರೆಡ್ಡಿ, ಆರ್.ವಿಜಯರೆಡ್ಡಿ, ಸಕ್ಕನಹಳ್ಳಿ ರವೀಂದ್ರರೆಡ್ಡಿ, ಆನಂದ್, ವಿಘ್ಞೇಶ್ವರ ಅಗ್ರಿಟೆಕ್ ಮಾಲೀಕರಾದ ರಮೇಶ್ ಮೊದಲಾದವರು.