• Thu. May 2nd, 2024

ತಲ್ಲಪ್ಪಲ್ಲಿ ಸೋಮೇಶ್ವರ ದೇವರ ರಥೋತ್ಸವಕ್ಕೆ ಆರ್ಥಿಕ ಸಹಾಯ ಮಾಡಿದ ಸುರೇಶ್.

PLACE YOUR AD HERE AT LOWEST PRICE

ಕ್ಯಾಸಂಬಳ್ಳಿ ಹೋಬಳಿ , ಸುಂದರಪಳ್ಯ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಸೇರಿರುವ ತಲ್ಲಪಲ್ಲಿ ಗ್ರಾಮದಲ್ಲಿ ಪುರಾತನ ಪ್ರಸಿದ್ದವಾದ ಶ್ರೀ ಪ್ರಸನ್ನ ಪಾರ್ವತೀ ಸಮೇತ ಸೋಮೇಶ್ವರ ಸ್ವಾಮಿ ರಥೋತ್ಸವ ಮತ್ತು ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ನಡೆಯಿತು.
ಈ ಮಹೋತ್ಸವದಲ್ಲಿ ಕಮ್ಮಸಂದ್ರ ಗ್ರಾಮ ಪಂಚಾಯತಿಯ ಅಧ್ಯಕ್ಷ OSR ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ, ಬಿಜೆಪಿಯ ಆಕಾಂಕ್ಷಿ  ಹಾಗೂ KGF ವಿಧಾನ ಸಭಾ ಕ್ಷೇತ್ರದ ಸಮಾಜ ಸೇವಕರಾದ B . ಸುರೇಶ ರವರು ತಲ್ಲಪಳ್ಳಿ ಗ್ರಾಮದ ಮುಖ್ಯಸ್ಥರೊಂದಿಗೆ ಭಾಗವಹಿಸಿ ರಥೋತ್ಸವಕ್ಕೆ ಆರ್ಥಿಕ ಸಹಾಯ ಮಾಡಿ ಮಹೋತ್ಸವವನ್ನು ವೈಭವದಿಂದ ನಡೆಸಲು ಸಹಕಾರಿಯಾದರು.
ಈ ವೇಳೆ ಕಮ್ಮಸಂದ್ರ ಗ್ರಾಪಂ‌ ಅದ್ಯಕ್ಷ ಸುರೇಶ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಗ್ರಾಮಗಳಲ್ಲಿ ದೇವತಾ ಕಾರ್ಯಗಳು ಸ್ಥಗಿತಗೊಂಡಿದ್ದವು, ಕೊವಿಡ್ ಕಡಿಮೆಯಾಗಿದ್ದು ಜನ ಈಗೀಗ ಆರ್ಥಿಕವಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ.
ಇಂಥಹ ಸಂರ್ಧದಲ್ಲಿ ಗ್ರಾಮಗಳಲ್ಲಿ ಜನ ದೇವತಾ ಕಾರ್ಯಕ್ರಮಗಳನ್ನು ಶಕ್ತಿಮೀರಿ ವಿಜೃಂಭಣೆಯಿಂದ ಮಾಡುತ್ತಿದ್ದು, ಇಂಥಹ ಕಾರ್ಯಗಳಿಗೆ ಸಹಾಯ ಮಾಡುವುದು ಈ ಮಣ್ಣಿನ ಮಗನಾದ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ  ಸದಸ್ಯರಾದ ಸುರೇಶ್ ರೆಡ್ಡಿ, ಮಂಜುನಾಥ್ ರೆಡ್ಡಿ, ಶ್ರೀನಿವಾಸ್, ನಾಗಭೂಶನ್, M ಶ್ರೀನಿವಾಸ್, ಬಿಜೆಪಿ ಮುಖಂಡರಾದ ಮುನಿಸ್ವಾಮಿರೆಡ್ಡಿ, ಅಪ್ಪಿ ರೆಡ್ಡಿ, ಜಯರಾಮರೆಡ್ಡಿ, D.V ಸುಬ್ರಮಣ್ಯಂ, ಶಿವಾರೆಡ್ಡಿ, ಸಂಪಂಗಿ, ಕಿರಣ್, ಯಶು, ಮಧು,ಹರೀ, ಮಂಜು ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!