• Fri. May 17th, 2024

ಸರ್ಕಾರಿ ಕಛೇರಿಗಳಿಗೆ ಆಗ್ರಹಿಸಿ ಇಂದು ಕೆಜಿಎಫ್ ನಲ್ಲಿ ದಲಿತ ಸಂಘಟನೆಗಳಿಂದ ಪ್ರತಿಭಟನೆ.

PLACE YOUR AD HERE AT LOWEST PRICE

ಕೆಜಿಎಫ್ ತಾಲ್ಲೂಕು ಪ್ರತ್ಯೇಕಗೊಂಡು ನಾಲ್ಕು ವರ್ಷಗಳಾಗುತ್ತಿದ್ದರೂ ಇನ್ನೂ ತಾಲ್ಲೂಕು ಮಟ್ಟದ ಕಛೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೆ ಎಲ್ಲಾ ಕಛೇರಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ದಲಿತ ಸಂಘಟನೆಗಳು ಸತತವಾಗಿ ಒತ್ತಾಯಿಸುತ್ತಾ ಬರುತ್ತಿವೆ.

ಸುಸಜ್ಜಿತವಾದ ತಾಲ್ಲೂಕು ಆಡಳಿತ ಸೌಧ ಉದ್ಘಾಟನೆಗೊಂಡಿದೆ. ಆದರೆ ಸರ್ಕಾರ ತಾಲ್ಲೂಕು ಕಛೇರಿಯನ್ನೇ ಇನ್ನೂ ಸಂಪೂರ್ಣವಾಗಿ ಆರಂಭಿಸಿಲ್ಲ. ಜೊತೆಗೆ ತಾಲ್ಲೂಕು ಮಟ್ಟದ ಕಛೇರಿಗಳೆಂದು ಕೇವಲ ನಾಮಫಲಕಗಳನ್ನು ಮಾತ್ರ ಅಳವಡಿಸಲಾಗಿದೆ ಆದರೆ ಸಿಬ್ಬಂದಿ ಸಂಪೂರ್ಣ ನೇಮಕವಾಗಿಲ್ಲ.

ತಾಲ್ಲೂಕು ಕಛೇರಿಯಲ್ಲಿ ಹಕ್ಕು ದಾಖ;ಲೆ ವಿಭಾಗ ಆರಂಭಿಸಿ ಎಲ್ಲಾ ಹಳೆಯ ದಾಖಲೆಗಳನ್ನು ಇಲ್ಲೆ ನೀಡುವ ಮೂಲಕ ಜನ ಬಂಗಾರಪೇಟೆಗೆ ಅಲೆಯುವುದನ್ನು ತಪ್ಪಿಸಬೇಕು. ತಾಲ್ಲೂಕು ಕಛೇರಿಗೆ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ದಲಿತ ಸಂಘಟನೆಗಳ ಒತ್ತಾಯವಾಗಿದೆ.

ಜೊತೆಗೆ ಈ ಕೂಡಲೆ ಸಬ್ ರಿಜಿಷ್ಟಾರ್ ಕಛೇರಿ, ಸಮಾಜ ಕಲ್ಯಾಣ ಇಲಕಾಖೆ, ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳನ್ನು ಆರಂಬಿಸಬೇಕಂದು ಒತ್ತಾಯಿಸಿ ದಲಿತ ಸಂಘಟನೆಗಳ  ಒಕ್ಕೂಟದ ಕಾರ್ಯಕರ್ತರು ಇಂದು ಕೆಜಿಎಫ್ ನಗರದಲ್ಲಿ ಬೆಳಿಗ್ಗೆ 11ಘಂಟೆಯಿಂದ ಸಂಜೆ 4ಘಂಟೆಯ ತನಕ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ತಾಲ್ಲೂಕು ಪ್ರತ್ಯೇಕಗೊಂಡ ಮೇಲೆ ಇಲ್ಲಿನ ಜನರ ಕೆಲಸಗಳು ಕುಂಟುತ್ತಾ ಸಾಗುತ್ತಿದ್ದು, ಈ ಕೂಡಲೆ ಜನರ ಬಾಕಿ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ಮೊದಲಾದ ಬೇಡಿಕೆಗಳನ್ನು ಇಟ್ಟು ದಲಿತ ಸಂಘಟನೆಗಳ ಒಕ್ಕೂಟವು ಇಂದು ಉರಿಗಾಂ ರೈಲ್ವೆ ನಿಲ್ದಾಣ ರಸ್ತೆಯ ಟೆಂಪೊ ಸ್ಟಾಂಡ್ ಬಳಿ ಪ್ರತಿಭಟನೆ ಹಮ್ಮಿಕೊಂಡಿದೆ.

ಕೆಜಿಎಫ್ ತಾಲ್ಲೂಕಿಗೆ ಸಂಭಂಧಿಸಿದ ಎಲ್ಲಾ ಇಲಾಖೆಗಳು ಕೂಡಲೆ ಆರಂಭವಾಗಬೇಕು, ತಾಲ್ಲೂಕು ಮಟ್ಟದ ಅಧಿಕಾರಿಗಳನ್ನಾಗಿ ಬಂಗಾರಪೇಟೆ  ತಾಲ್ಲೂಕಿನ ಅಧಿಕಾರಿಗಳನ್ನು ಹೆಚ್ಚುವರಿಯಾಗಿ ನೇಮಕ ಮಾಡಿರುವುದನ್ನು ರದ್ದುಪಡಿಸಿ ಕೆಜಿಎಫ್ ತಾಲ್ಲೂಕಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇರವಾಗಿ ನಿಯೋಜಿಸಬೇಕೆಂದೂ ಸಹ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಲಿದೆ.

 

 

 

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!