PLACE YOUR AD HERE AT LOWEST PRICE
ಕೋಲಾರ ಜಿಲ್ಲಾ ಕ್ರೀಡಾಪಟುಗಳ, ಕ್ರೀಡಾ ಪ್ರೇಮಿಗಳ, ಸಾರ್ವಜನಿಕರ ಕನಸು ನನಸಾಗುತ್ತಿದ್ದು ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಅತಿ ಶೀಘ್ರ ಮುಕ್ತಾಯಗೊಳ್ಳಲಿ ಮತ್ತು ಗುಣಟ್ಟದ ಕಾಮಗಾರಿ ನಡೆಸಿ ಎಂದು ಸಚಿವ ಮುನಿರತ್ನ ಕರೆ ನೀಡಿದರು.
ಗಣರಾಜ್ಯೋತ್ಸವದ ದಿನ ಕೋಲಾರ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳು, ಜನಪ್ರತಿನಿಧಿಗಳು, ಸಾರ್ವಜನಿಕರ ಬಹುದಿಗಳ ಕನಸು ಇದಾಗಿದ್ದು, ಇದೀಗ ಈಡೇರುತ್ತಿದ್ದು, ಅಗತ್ಯ ಅನುದಾನ ಒದಗಿಸಿಲಾಗಿದೆ, ಕಾಮಗಾರಿ ಶೀಘ್ರ ಮುಗಿಸುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಲೋಕಾರ್ಪಣೆಗೊಳ್ಳಲಿ ಎಂದರು.
ಜಿಲ್ಲೆಯ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸಿಂಥೆಟಿಕ್ ಅಥ್ಲೆಟಿಕ್ಸ್ ಟ್ರ್ಯಾಕ್ ಜೊತೆಗೆ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ನೈಸರ್ಗಿಕ ಹುಲ್ಲು ಹಾಸಿನ ಕಾಲ್ಚೆಂಡಿನ ಅಂಕಣ, ಸಂಪ್ ಟ್ಯಾಂಕ್, ಹತ್ತು ಟ್ರ್ಯಾಕುಗಳು ಇನ್ನಿತರ ಕ್ರೀಡಾ ಚಟುವಟಿಕೆಯ ಅಭಿವೃದ್ಧಿಗೆ ಅಗತ್ಯ ಕ್ರಮದ ಭರವಸೆ ನೀಡಿದರು.
ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ಸ್ ಕಾರ್ಯದರ್ಶಿ ಕೆ.ಜಯದೇವ ಮಾತನಾಡಿ, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ಸ್ ಪ್ರಯತ್ನವು ಯಶಸ್ವಿಯಾಗಿದ್ದು, ೭ಕೋಟಿ ಅನುದಾನದಲ್ಲಿ ಉತ್ತಮ ದರ್ಜೆಯ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರಿಗೂ ಹರ್ಷ ತಂದಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ಸ್ ದೊಂದಿಗೆ ಕೈಜೋಡಿಸಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಂಪೂರ್ಣ ಸಹಕರಿಸಿದ್ದು ಅವರ ಕಾರ್ಯವೈಖರಿಯಿಂದ ಬಹುಬೇಗ ಅನುದಾನ ಬಿಡುಗಡೆಯಾಗಿ, ಗುತ್ತಿಗೆ ನೀಡಲು ಅನುಕೂಲವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜು, ಅನಿಲ್ಕುಮಾರ್, ಜಿಲ್ಲಾಧಿಕಾರಿವೆಂಕಟ್ರಾಜಾ, ಎಸ್ಪಿ ಎಂ.ನಾರಾಯಣ, ಜಿಪಂ ಸಿಇಒ ಯುಕೇಶ್ಕುಮಾರ್, ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಜಗನ್, ಮುಖಂಡರಾದ ಚೆಂಜಿಮಲೆ ರಮೇಶ್, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ಸ್ ಉಪಾಧ್ಯಕ್ಷ ಗೌಸ್ ಖಾನ್, ಖಜಾಂಚಿ ಎಸ್.ಆರ್.ಪುರುಷೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.