ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಕೆಜಿಎಫ್:ಅಡುಗೆ ಅನಿಲ ಸೋರಿಕೆಯಿಂದ ದೊಡ್ಡಮಟ್ಟದ ಸಿಲೀಂಡರ್ ಸ್ಪೋಟಗೊಂಡು ಮನೆ ಉರುಳಿದ್ದು, ಮನೆಯಲ್ಲಿದ್ದ ವ್ಯಕ್ತಿಗೆ ಗಾಯಗಳಾಗಿದ್ದು ಉಳಿದ ಮೂರು ಜನ ಬಚಾವಾಗಿರುವ ಘಟನೆ ತಾಲ್ಲೂಕಿನ ಕಾಲುವಲಹಳ್ಳಿಯಲ್ಲಿ ನಡೆದಿದೆ.
ಮನೆಯ ಯಜಮಾನ ವೆಂಕಟೇಶಪ್ಪ ಅಡುಗೆ ಮನೆಗೆ ಹೋಗಿ ವಿದ್ಯುತ್ ಲೈಟ್ ಆನ್ ಮಾಡುತ್ತಿದ್ದಂತೆ ಅಡುಗೆ ಅನಿಲ ಸೋರಿಕೆಯಿಂದಾಗಿ ಸಿಲೀಂಡರ್ ಸ್ಪೋಟಗೊಂಡಿದೆ. ಸ್ಪೋಟದ ವೇಗಕ್ಕೆ ಮನೆಯೇ ಉರುಳಿಬಿದ್ದಿದ್ದು, ವೆಂಕಟೇಶಪ್ಪರಿಗೆ ಗಾಯಗಳಾಗಿವೆ.
ಮನೆಯಲ್ಲಿದ್ದ ವೆಂಕಟೇಶಪ್ಪರ ಪತ್ನಿ, ಸೊಸೆ ಮತ್ತು 7ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಪೋಟದ ಶಬ್ದ ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ತರು ವೆಂಕಟೇಶಪ್ಪರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆಂಡರ್ ಸನ್ ಪೆಟ್ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.