PLACE YOUR AD HERE AT LOWEST PRICE
ಮಾಲೂರು:ಮಾಲೂರು ತಾಲ್ಲೂಕು ದೋಡ್ಡಮಲ್ಲೆ ಗ್ರಾಮದ ಸಂತ್ರಸ್ತೆ ಪೂಜ ತನ್ನ ಪಕ್ಕದ ಮನೆಯ ಕಿರಣ್ ಜೊತೆ ಕಲೆದ ಐದು ವರ್ಷಗಳಿಂದ ಪ್ರೀತಿಯಲ್ಲಿದ್ದು ಈಗ ಕಿರಣ್ ಮದುವೆಯಾಗಲು ನಿರಾಕರಿಸಿರುವ ಕಾರಣ ಕಿರಣ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.
ಪ್ರತಿಭಟನೆ ವೇಳೆ ಮಾತನಾಡಿದ ಪೂಜ ಇಬ್ಬರೂ ಪ್ರೀತಿಸುತ್ತಿದ್ದ ವಿಷಯ ತಿಳಿದ ಪೂಜಳ ಪೋಷಕರು ಪೂಜಳನ್ನು ಒಂದುವರೆ ವರ್ಷದ ಹಿಂದೆ ಸಾಂಪ್ರದಾಯಿಕವಾಗಿ ತಮಿಳುನಾಡಿನ ಹುಡುಗನ ಜೊತೆ ಮದುವೆ ಮಾಡಿ ಕಳುಹಿಸಿದ್ದರು.
ಕಿರಣ್ ಮಾತು ಕೇಳಿ ಗಂಡನಿಗೆ ವಿಚ್ಛೇದನ ನೀಡಿ ಕಿರಣ್ ಮನೆಗೆ ಬಂದ ಪೂಜಳನ್ನು ಕಿರಣ್ ಮನೆಯಲ್ಲಿಕಿರಣ್ ಅಪ್ಪ ಅಮ್ಮ ಇಬ್ಬರು ಮನೆಗೆ ಕರೆದುಕೊಳ್ಳಲು ಒಪ್ಪದೆ ಪೂಜಳನ್ನು ನಿರಾಕರಿಸಿದ್ದಾರೆ.
ಜೊತೆಗೆ ಕಿರಣ್ ಮಾತು ಕೇಳಿ ಗಂಡನಿಗೆ ಡೈವೋರ್ಸ್ ಕೊಟ್ಟು ಬಂದ ಪೂಜಳನ್ನು ತನ್ನ ಮನೆಯಲ್ಲಿ ಒಪ್ಪುತ್ತಿಲ್ಲವೆಂದು ಹೇಳಿ ಕಿರಣ್ ಮದುವೆಯಾಗಲು ನಿರಾಕರಿಸುತ್ತಿದ್ದು ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ ಎಂದು ಹೇಳಿದರು.
ಈ ಬಗ್ಗೆ ಮಾಸ್ತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿತ ಕಿರಣ್ ನಾಪತ್ತೆಯಾಗಿದ್ದು ಕಿರಣ್ ಗಾಗಿ ಪೋಲಿಸರು ಬಲೆ ಬೀಸಿದ್ದಾರೆ.