• Sat. May 18th, 2024

PLACE YOUR AD HERE AT LOWEST PRICE

ಕೋಲಾರ ತಾಲ್ಲೂಕಿನ ಕೊಂಡರಾಜನಹಳ್ಳಿ ಗ್ರಾಮದಲ್ಲಿ ೯ ವರ್ಷಗಳಿಗೊಮ್ಮೆ ನಡೆಯುವ ಶ್ರೀ ವೀರಮುದ್ದಮ್ಮ ದೇವಿ ದೊಡ್ಡದ್ಯಾವರ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಕುರುಬ ಸಮುದಾಯದ ಹಾಲುಮತಸ್ಥ ಕುಟುಂಬಸ್ಥರು ಎಲ್ಲರೂ ಒಟ್ಟಿಗೆ ಸೇರಿ ಮನೆ ದೇವರ ವಿಶೇಷ ಪೂಜೆಗಳನ್ನು ಸಮುದಾಯದ ಈಶ್ವರಾನಂದಪುರಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನೆರವೇರಿಸಿದರು.

ಈ ಆಚರಣೆಯೂ ಕುರುಬ ಸಮಾಜದ ಹಾಲುಮತಸ್ಥರು ಸೇರಿ ಒಂಬತ್ತು ದಿನಗಳಲ್ಲಿ ಕೊನೆಯ ದಿನವಾದ ಇಂದು ತೆಂಗಿನಕಾಯಿ ಪವಾಡ ಮಾಡೋದು ವಿಶೇಷವಾಗಿತ್ತು.

ಗುರುದೀಕ್ಷೆ ಪಡೆದ ಪೂಜಾರಿಗಳು ತೆಂಗಿನಕಾಯಿ ಪವಾಡ ಮಾಡುವ ಮೂಲಕ ಜನರ ಗಮನ ಸೆಳೆದಿದ್ದು, ಕಟ್ಟುನಿಟ್ಟಿನ ವ್ರತಾಚರಣೆ ಮಾಡಿ ಮೂರು ದಿನಗಳ ನಿಗದಿತ ಉಪವಾಸ ಹಾಗೂ ಆಚರಣೆಗಳನ್ನು ಮಾಡಿದ ನಂತರ ದೇವರ ಎದುರು ತೆಂಗಿನಕಾಯಿ ಪವಾಡ ಮಾಡಲಾಗುತ್ತದೆ.

ಪವಾಡ ಪೂಜಾರಿ ಮುನಿರಾಜು ಮಾತನಾಡಿ, ತೆಂಗಿನಕಾಯಿ ಪವಾಡ ಮಾಡುವ ಪೂಜಾರಿಗಳು ಈ ಪವಾಡ ಮಾಡಬೇಕೆಂದರೆ ಕೆಲವೊಂದು ಕಟ್ಟುನಿಟ್ಟಿನ ಆಚರಣೆಗಳನ್ನು ನಿರಂತವಾಗಿ ಅನುಸರಿಸಲೇಬೇಕು, ಗುರುದೀಕ್ಷೆ ಪಡೆದ ಪೂಜಾರಿಗಳು ಮಾತ್ರ ಈ ಪವಾಡದಲ್ಲಿ ಭಾಗವಹಿಸುತ್ತಾರೆ, ಈ ಪೂಜಾರಿಗಳು ಶವ ಸಂಸ್ಕಾರದಲ್ಲಿ ಭಾಗವಸುವಂತಿಲ್ಲ ಇನ್ನು ಈ ದೊಡ್ಡದ್ಯಾವರ ಮಹೋತ್ಸವ ೯ ದಿನಗಳ ಕಾಲ ನಡೆಯುತ್ತದೆ ಎಂದರು.

ಮೊದಲ ದಿನ ಬಂಡಾರಪೆಟ್ಟಿಗೆ ಪೂಜೆ, ಗೋಪೂಜೆ, ಮೂಲಕ ಆರಂಭವಾಗಿ ಕೊನೆಯ ದಿನ ತೆಂಗಿನಕಾಯಿ ಪವಾಡದ ನಂತರ ಕುಟುಂಬದಲ್ಲಿ ಹೊಸದಾಗಿ ಮದುವೆಯಾಗಿರುವವರಿಗೆ ದೀಪ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮ ೯ ವರ್ಷಗಳಿಗೊಮ್ಮೆ ನಡೆಯುವುದರಿಂದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಯಾವುದೇ ದೇಶದಲ್ಲಿದ್ದರೂ ತಪ್ಪದೇ ಭಾಗವಹಿಸುತ್ತಾರೆ ಎಂದರು.

ಕುರುಬ ಸಮುದಾಯದ ಮುಖಂಡ ಕೆಎಂಎಂ ಪ್ರಕಾಶ್, ಹಾಲುಮತಸ್ಥ ಜನಾಂಗದವರು ಹೀಗೆ ದೊಡ್ಡ ದ್ಯಾವರ ಅಥವಾ ದೊಡ್ಡ ಜಾತ್ರೆ ಹೆಸರಲ್ಲಿ ಒಂದೆಡೆ ಸೇರಿ ತಮ್ಮ ಜನಾಂಗದ ಒಗ್ಗಟ್ಟನ್ನು ಪ್ರದರ್ಶನ ಮಾಡವ ಜೊತೆಗೆ ತಮ್ಮ ದೇವರ ಆರಾಧನೆ ಮಾಡೋದು ಹಾಗೂ ಸಂಬಂಧಗಳನ್ನು ಬೆಸೆಯೋದು, ತಮ್ಮ ಜನಾಂಗದ ಸಂಪ್ರದಾಯವನ್ನು ಉಳಿಸೋ ಬೆಳೆಸಲು ನಮ್ಮ ಹಿರಿಯರು ಹಾಕಿಕೊಟ್ಟಿರುವ ಆಚರಣೆ ಇದಾಗಿದೆ ಎಂದರು.

ಸುದ್ದಿ ಓದಿ ಹಂಚಿ:

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!