PLACE YOUR AD HERE AT LOWEST PRICE
ಬಂಗಾರಪೇಟೆ:ಚಿನ್ನ ಖರೀದಿ ಮಾಡುವ ನೆಪದಲ್ಲಿ 75 ಗ್ರಾಂ ತೂಕದ 5 ಲಕ್ಷ ಮೌಲ್ಯದ ಚಿನ್ನವನ್ನ ಕಳುವು ಮಾಡಿರುವ ಘಟನೆ ಬಂಗಾರಪೇಟೆ ಪಟ್ಟಣದ ಬಜಾರ್ ರಸ್ತೆಯಲ್ಲಿ ನಡೆದಿದೆ.
ಚಿನ್ನದಂಗಡಿಯಲ್ಲಿ ಖತರ್ನಾಕ್ ಕಳ್ಳಿಯರ ಕೈ ಚಳಕ ಚಿನ್ನದಂಗಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಬೂರ್ಖಾ ಧರಿಸಿ ಚಿನ್ನ ಖರೀದಿ ಮಾಡಲು ನಿನ್ನೆ ಸಂಜೆ 5-30 ರ ಸುಮಾರಿಗೆ ಚಿನ್ನದಂಗಡಿಗೆ 5 ಜನ ಮಹಿಳೆಯರ ಬಂದಿದ್ದರು.
ಇವರ ಜೊತೆಗಿದ್ದ ಒರ್ವ ಮಹಿಳೆ ಚಿನ್ನ ಇಟ್ಟಿದ್ದ ಕಬಾರ್ಡ್ನಲ್ಲಿದ್ದ ಚಿನ್ನವನ್ನ ದೋಚುವ ದೃಷ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪಟ್ಟಣದ ಬಜಾರ್ ರಸ್ತೆಯಲ್ಲಿರುವ ಮಹಾವೀರ್ ಜ್ಯೂವಲರ್ಸ್ನಲ್ಲಿ ಈ ಘಟನೆ ನಡೆದಿದೆ.
ಸುಮಾರು 5 ಲಕ್ಷ ಮೌಲ್ಯದ 75 ಗ್ರಾಂ ಚಿನ್ನವನ್ನ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದರು. ಅದರಂತೆ ಸಿದ್ದಪಡಿಸಿದ ಚನ್ನವನ್ನ ಬಾಕ್ಸ್ನಲ್ಲಿ ಹಾಕಿ ಇಡಲಾಗಿತ್ತು, ಆದ್ರೆ ಸಂಜೆ ಪರಿಶೀಲನೆ ನಡೆಸಿದ ವೇಳೆ ಕಳ್ಳಿಯರ ಕೈ ಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಮಂಗಳವಾರವಷ್ಟೆ ಅಳಿಯನನ್ನ ಕಳೆದುಕೊಂಡಿದ್ದ ಚಿನ್ನದ ಅಂಗಡಿ ಮಾಲೀಕ ಮಹಾವೀರ್ ಚಂದ್ ಸಾವಿನ ಸೂತಕದಲ್ಲಿದ್ದರು. ಗ್ರಾಹಕರೊಬ್ಬರಿಗೆ ನೀಡಲು ತಯಾರಿ ಮಾಡಿಟ್ಟಿದ್ದ ಚಿನ್ನದ ಒಡವೆಗಳಿದ್ದ ಬಾಕ್ಸ್ನ್ನ ಬೂರ್ಕಾದಲ್ಲಿ ಹಾಕಿಕೊಂಡು ಮಹಿಳೆ ಪರಾರಿಯಾಗಿದ್ದಾಳೆ.
ಪರಾರಿಯಾಗುವ ಮಹಿಳೆಯ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.