PLACE YOUR AD HERE AT LOWEST PRICE
ಕೋಲಾರದ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಇನ್ಟಕ್ ಕಟ್ಟಡ ಕಾರ್ಮಿಕರ ಸಂಘದ ತಾಲೂಕ ಅಧ್ಯಕ್ಷರು ಮತ್ತು ರೇಣುಕಾ ಎಲ್ಲಮ್ಮ ಬಳಗದ ತಾಲೂಕು ಅಧ್ಯಕ್ಷರು, ಚಿನ್ನಾಪುರ ಕೊಡಿಯಪ್ಪ ನವರು ಜೂನ್ ೯ರ ಸಂಜೆ ಹೃದಯಘಾತದಿಂದ ಮೃತಪಟ್ಟಿದ್ದಾರೆ. ನಾಳೆ ಮಧ್ಯಾಹ್ನ ೧೨ ಗಂಟೆಗೆ ಅವರ ಸ್ವಗ್ರಾಮವಾದ ಕೋಲಾರದ ಚಿನ್ನಾಪುರದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಕೊಡಿಯಪ್ಪನವರು ಕೋಲಾರದ ಕಾಂಗ್ರೆಸ್ ಪಕ್ಷದಲ್ಲಿ ಸೇವಾದಳ ಮುಖಂಡರಾಗಿ, ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐ.ಎನ್.ಟಿ.ಯು.ಸಿ.) ಕಟ್ಟಡ ಕಾರ್ಮಿಕ ಘಟಕದ ತಾಲ್ಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ರೇಣುಕಾ ಯಲ್ಲಮ್ಮ ಬಳಗದಲ್ಲಿ ಕಳೆದ ೨೫ ವರ್ಷಗಳು ಶ್ರದ್ಧೆಯಿಂದ ಸಮಾಜದ ಅಭಿವೃದ್ಧಿಗೆ ದುಡಿದ ಏಕೈಕ ವ್ಯಕ್ತಿ ಅಂದರೆ ಅದು ಕೊಡಿಯಪ್ಪ.
ಸಾಮಾಜಿಕವಾಗಿ ತುಂಬಾ ಕಷ್ಟದಿಂದ ಜೀವನ ಪ್ರಾರಂಭ ಮಾಡಿ ಒಬ್ಬ ಪ್ರಭಾವಿ ಗುತ್ತಿಗೆದಾರರಾಗಿ ಸಮಾಜದ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಬೆಳೆದವರು. ೨೫ ವರ್ಷಗಳ ಕಾಲ ಯಲ್ಲಮ್ಮ ಬಳಗದಲ್ಲಿ ಕೆಲಸ ಮಾಡಿದ ಕ್ರಿಯಾಶೀಲ ವ್ಯಕ್ತಿ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆಯಿಂದ ಸಮಾಜಕ್ಕೆ ಅಪಾರ ನಷ್ಟವಾಗಿದೆ.
ಈ ದುಃಖ ತಡೆಯಲು ಅವರ ಕುಟುಂಬದವರಿಗೆ ದೇವರು ಶಕ್ತಿ ನೀಡಲೆಂದು ಕೋರಿ. ಯಲ್ಲಮ್ಮ ಬಳಗದ ಜಿಲ್ಲಾಧ್ಯಕ್ಷ ಬಂಡೂರು ನಾರಾಯಣಸ್ವಾಮಿ, ಗೌರವ ಅಧ್ಯಕ್ಷ ವಿ.ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಬೆಳ್ಳಾರಪ್ಪ, ಹಿರಿಯ ಪತ್ರಕರ್ತರಾದ ಕೆ.ಎಸ್.ಗಣೇಶ್, ಸಿ.ವಿ.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಐ.ಎನ್.ಟಿ.ಯು.ಸಿ. ಜಿಲ್ಲಾಧ್ಯಕ್ಷ ಹೊನ್ನೇನಹಳ್ಳಿ ಯಲ್ಲಪ್ಪ, ಕಾಂಗ್ರೆಸ್ ಪಕ್ಷದ ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಭಾರತೀಯ ದಲಿತ ಸೇನೆ ಅಧ್ಯಕ್ಷ ದಲಿತ ನಾರಾಯಣಸ್ವಾಮಿ ಸಂತಾಪ ಸೂಚಿಸಿದ್ದಾರೆ.