• Wed. May 1st, 2024

ಓಂಶಕ್ತಿ ಮಾಲಾಧಾರಿಗಳಿಗೆ ಉಚಿತ ಬಸ್ ಸೌಲಭ್ಯ ಯಾವುದೇ ರಾಜಕೀಯ ಉದ್ದೇಶವಿಲ್ಲ-ಓಂಶಕ್ತಿಚಲಪತಿ

PLACE YOUR AD HERE AT LOWEST PRICE

ರಾಜಕೀಯ ಉದ್ದೇಶಕ್ಕಾಗಿ ಓಂ ಶಕ್ತಿ ಮಾಲಾಧಾರಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಿಲ್ಲ, ದೇವರ ಮೇಲಿನ ಭಕ್ತಿಯಿಂದ ನಮ್ಮ ಫೌಂಡೇಶನ್ ವತಿಯಿಂದ ಕೈಲಾದ ಸಹಾಯವನ್ನು ಮಾಡುತ್ತಿದ್ದೇನೆ ಎಂದು ಓಂಶಕ್ತಿ ಫೌಂಡೇಶನ್ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.

ಕೋಲಾರ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಶುಕ್ರವಾರ ಓಂ ಶಕ್ತಿ ಮಾಲಾಧಾರೆಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಮಾತನಾಡಿದ ಅವರು ಚುನಾವಣೆ ಕೇವಲ ಎರಡು ದಿನ ಆವಾಗ ಬೇಕಾದರೆ ರಾಜಕೀಯ ಮಾಡೋಣ ಇವತ್ತು ರಾಜಕಾರಣ ಮಾಡುವುದಿಲ್ಲ ಯಾವುದೇ ಪಕ್ಷದವರು ಆದರೂ ಸರಿ ಕೋಲಾರ ವಿಧಾನಸಭಾ ಕ್ಷೇತ್ರದ ಜನತೆಗೆ ಈ ಸೇವೆಯನ್ನು ಒದಗಿಸುತ್ತಾ ಇದ್ದೇವೆ ಫೆಬ್ರವರಿ ೨೩ ರವರಗೆ ಪ್ರತಿದಿನ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದು ಇದರ ಸೇವೆಯನ್ನು ಕ್ಷೇತ್ರದ ಜನತೆ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಮಾಲಾಧಾರಿಗಳು ಓಂಶಕ್ತಿ ದೇವಾಲಯ ಸೇರಿದಂತೆ ಸುಮಾರು ಎಂಟು ಸ್ಥಳಗಳನ್ನು ನೋಡಬಹುದಾಗಿದೆ ಮಾಲಾದಾರಿಗಳು ನೆಮ್ಮದಿಯಾಗಿ ಜಾಗೃತಿಯಿಂದ ದರ್ಶನ ಮಾಡಿಕೊಂಡು ಬನ್ನಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಚಿನ್ನಾಪುರ ಗ್ರಾಪಂ ಸದಸ್ಯ ನಾಗರಾಜ್ ಮುಖಂಡರಾದ ಗೋವಿಂದರಾಜು, ರಮೇಶ್ ಮುಂತಾದವರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!