• Sun. May 19th, 2024

PLACE YOUR AD HERE AT LOWEST PRICE

ಕೋಲಾರ:ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿಯ ನಿವಾಸಿ ಹುಡುಗಿಯ ವಿಚಾರಕ್ಕೆ ರಾಕೇಶ್ ಕೊಲೆಯಾಗಿದೆ. ಈಗಾಗಲೇ ಪೋಲಿಸ್ ಇಲಾಖೆ ಇಬ್ಬರನ್ನು ಬಂಧಿಸಿ ,ಮತ್ತಿಬ್ಬರಿಗಾಗಿ ತಲಾಷೆ ನಡೆಸುತ್ತಿದ್ದು, ಇದಕ್ಕೆ ಜಾತಿಯ ಬಣ್ಣ ಬಳಿಯುವ ಯತ್ನವನ್ನು ಕದಸಂಸ ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ ಖಂಡಿಸಿದ್ದಾರೆ.

ಈ ಮಧ್ಯೆ ವಿಮರ್ಶಕ, ಬರಹಗಾರ ವಡ್ಡಗೆರೆ ನಾಗರಾಜ್ ಎಂಬುವರು ಸಾಮಾಜಿಕ ಜಾಲ ತಾಣಗಳಲ್ಲಿ ಉಪಜಾತಿಗಳನ್ನು ಹೆಸರಿಸಿ ಕೋಲಾರ ಜಿಲ್ಲೆಯ ದಲಿತ ಚಳುವಳಿಯ ತವರೂರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ .ಇದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ಕೊಲೆಯಾಗಿರುವುದು ನಿಜ. ಅದನ್ನು ನಾವು ಖಂಡಿಸುತ್ತೇವೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇದರಲ್ಲಿ ಎರಡು ಮಾತಿಲ್ಲ. ಘಟನೆಯ ವಾಸ್ತವತೆಯನ್ನು ಅರಿಯದೆ ಜಾತಿ ಜಾತಿಗಳ ಮಧ್ಯೆ ಸಂಘರ್ಷಗಳನ್ನು ಏರ್ಪಡಿಸುವ, ಸಮಾಜದ ಶಾಂತಿಯನ್ನು ಕದಡುವ ಬುದ್ದಿ ಜೀವಿಗಳಿಂದ ಇಂತಹ ಹೇಳಿಕೆಗಳು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕೋಲಾರ,ಕೆ ಜಿಎಫ್ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಂತಹ ಪ್ರೇಮ ಪ್ರಕರಣಗಳಿಗಾಗಿ ಕೊಲೆಗಳಾಗುತ್ತಿವೆ. ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಜೊತೆಗೆ ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿಯ ರಾಕೇಶ್ ಕೊಲೆ ಆರೋಪಿಗಳನ್ನು ಬಂಧಿಸಿ ಆ ಕುಟುಂಬಕ್ಕೆ ಜಿಲ್ಲಾಡಳಿತ ಸಾಂತ್ವಾನ ಹೇಳಬೇಕು.

ಜೊತೆಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಿಂದ ಇದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕೆಂದು ಸಂಘಟನೆಯ ಪರವಾಗಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್, ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ಚವ್ವೆನಹಳ್ಳಿ ವಿಜಿ, ಡಾ.ರೋಜಾರಪಲ್ಲಿ ವೆಂಕಟರವಣಪ್ಪ, ಗನ್ ವೆಂಕಟರವಣಪ್ಪ, ಹೆಚ್ ಮುನಿಚೌಡಪ್ಪ, ಗೋವಿಂದರಾಜು, ಮುದುವತ್ತಿ ಕೇಶವ, ಮರಸನಪಲ್ಲಿ ವೆಂಕಟರವಣಪ್ಪ, ಮದನಹಳ್ಳಿ ವೆಂಕಟೇಶ್ , ಎಸ್ ಎಂ ವೆಂಕಟೇಶ , ಶ್ರೀಧರ್, ಕೂಸಂದ್ರ ರೆಡ್ಡಪ್ಪ, ದೇಶೀಹಳ್ಳಿ ಸೀನಿ, ಶೆಟ್ಟಿವಾರಹಳ್ಳಿ ದೇವರಾಜು, ಮಹಿಳಾ ಒಕ್ಕೂಟದ ಚಂದ್ರಕಲಾ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆಂದು ನಾಗನಾಳ ಮುನಿಯಪ್ಪ ಹೇಳಿಕೆಯಲ್ಲಿ ತಿಲಳಿಸಿದ್ದಾರೆ.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!