• Mon. May 20th, 2024

ಚಂದ್ರಬಾಬು ನಾಯ್ಡು ರೋಡ್ ಶೋಗೆ ಅಡ್ಡಿ ವೈಎಸ್ಆರ್ ಕಾಂಗ್ರೆಸ್ ವಿರುದ್ಧ ಕಿಡಿ.

PLACE YOUR AD HERE AT LOWEST PRICE

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು  ದೇಶಂ ಪಕ್ಷದ ಮುಖ್ಯಸ್ಥರಾದ ನಾ.ರಾ ಚಂದ್ರಬಾಬು ನಾಯ್ಡು ತಾವು ಪ್ರತಿನಿಧಿಸುವ ಕುಪಂ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋಗೆ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ಆಂದ್ರದ ಗಡಿ ಗ್ರಾಮ ಕೆನಮಾಕನಪಲ್ಲಿಯಲ್ಲಿ ನಡೆಯಿತು.
ಚಂದ್ರಬಾಬು ನಾಯ್ಡು ಏಳು ಬಾರಿ ಗೆಲುವು ಸಾಧಿಸಿರುವ ಕುಪ್ಪಂ ಕ್ಷೇತ್ರಕ್ಕೆ ತೆರಳಲು ಕೆಜಿಫ್ ತಾಲೂಕಿನ ಎಂ ಕೊತ್ತೂರು ಬಳಿ ಬಂದಾಗ ಆಂಧ್ರದ ಗಡಿ ದಾಟಿ ಕರ್ನಾಟಕದ ಗಡಿಯೊಳಗೆ ಬಂದಿದ್ದ ತೆಲುಗು ದೇಶಂ ಪಕ್ಷದ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಚಂದ್ರಬಾಬು ನಾಯ್ಡು ಅವರನ್ನು ಸ್ವಾಗತಿಸಿದರು.
ನಂತರ ಚಂದ್ರಬಾಬು ನಾಯ್ಡು ರವರ ಯಾತ್ರೆ ಆಂಧ್ರಪ್ರದೇಶದ ಕುಪಂ ಕ್ಷೇತ್ರದ ಕೆನಮಾಕನಪಲ್ಲಿ ಪ್ರವೇಶಿಸಿತು.
ಕೆನಮಾಕನಪಲ್ಲಿಯಲ್ಲಿ ಸಭೆ ನಡೆಸಲು ಅಳವಡಿಸಿದ್ದ ಪೆಂಡಾಲನ್ನು ಪೊಲೀಸರು ಕಿತ್ತುಹಾಕಿದ್ದು ತೆಲುಗು ದೇಶಂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು ರವರು ಮುಖ್ಯಮಂತ್ರಿ  ಜಗನ್‌ಮೋಹನರೆಡ್ಡಿ ಅವರಿಗೆ ಸೋಲಿನ ಭೀತಿ ಶುರುವಾಗಿದೆ. ಆದ್ದರಿಂದಲೇ ತೆಲುಗು ದೇಶಂ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲು ಶುರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಗನ್‌ಮೋಹನರೆಡ್ಡಿ ಬೆಂಬಲಿಗರು ಗೂಂಡಾಗಿರಿ ವರ್ತನೆ ತೋರುತ್ತಿದ್ದು ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ‌. ವಿರೋಧ ಪಕ್ಷದ ನಾಯಕನಾಗಿರುವ ನನಗೆ ರೋಡ್ ಶೋ ನಡೆಸಲು ಅವಕಾಶ ನೀಡುತ್ತಿಲ್ಲ ಇದು  ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಆರೋಪ ಮಾಡಿದರು.
ರೋಡ್ ಶೋಗೆ ಅಡ್ಡಿಪಡಿಸಿದ ಸ್ಥಳೀಯ ಪೊಲೀಸರ ಮೇಲೂ ಸಹ ಚಂದ್ರಬಾಬು ನಾಯ್ಡು ಆಕ್ರೊಶ ವ್ಯಕ್ತಪಡಿಸಿ  ಪೊಲೀಸರು ಕಾನೂನು ರೀತಿ ನಡೆದುಕೊಳ್ಳಬೇಕು ಎಲ್ಲ ಪಕ್ಷಗಳನ್ನು ಮತ್ತು ಎಲ್ಲ ಜನರನ್ನ ಸರಿ ಸಮಾನವಾಗಿ ನೋಡಬೇಕು ಆದರೆ ಆಂದ್ರ ಪ್ರದೇಶದ ಪೊಲೀಸರು ಮುಖ್ಯಮಂತ್ರಿಯ ಜಗನ್‌ಮೋಹನರೆಡ್ಡಿ ಅವರ ಆಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪೊಲೀಸರು ಮತ್ತು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಡುವೆ ವಾಗ್ವಾದ ನಡೆದು ನಂತರ ಕುಪಂ ಕ್ಷೇತ್ರದ ಗ್ರಾಮಗಳಿಗೆ ತೆರಳಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!