PLACE YOUR AD HERE AT LOWEST PRICE
ಕೆಜಿಎಫ್:ಬೇತಮಂಗಲದ ಬಸ ನಿಲ್ಧಾಣದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಸ್ಥಳೀಯ ಗಣ್ಯರ ಸಮ್ಮುಖದಲ್ಲಿ ಧ್ವಜಸ್ಥಂಭವನ್ನು ಸ್ಥಾಪನೆ ಮಾಡಲಾಯಿತು.
ಬೇತಮಂಗಲದ ಬಸ್ ನಿಲ್ಧಾಣದಲ್ಲಿ ನೂತನವಾಗಿ ರೈತ ಸಂಘದ ಧ್ವಜವನ್ನು ರೈತ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಪಂ ಅಧ್ಯಕ್ಷ ವಿನೂ ಕಾರ್ತಿಕ್, ಬೇತಮಂಗಲ ಪಿಎಸೈ ಸತೀಶ್ ನೇತೃತ್ವದಲ್ಲಿ ಉದ್ಘಾಟನೆ ಮಾಡಲಾಯಿತು.
ಈ ವೇಳೆ ಗ್ರಾಪಂ ಅಧ್ಯಕ್ಷ ವಿನೂ ಕಾರ್ತಿಕ್ ಮಾತನಾಡಿ, ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜೀವನ ನಡೆಸುತ್ತಿದ್ದಾರೆ, ರೈತ ಪರ ಸಂಘಟನೆಗಳು ರೈತರಿಗೆ ಅನ್ಯಾಯವಾಗದಂತೆ ಹೋರಾಟ ಮಾಡಬೇಕು. ರೈತ ಸಂಘಟನೆಗಳಿಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸಂಚಾಲಕ ವಡ್ಡಹಳ್ಳಿ ಮಂಜುನಾಥ್, ಕರಗ ನಾರಾಯಣಸ್ವಾಮಿ, ಕೆಜಿಎಫ್ ತಾಲ್ಲೂಕು ಗೌರವಧ್ಯಕ್ಷ ನಾಗರಾಜ್, ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಜನಾರ್ಧನ್, ಕಾರ್ಯದರ್ಶಿ ಅಂಬರೀಶ್, ಖಜಾಂಚಿ ಶಂಕರ್ ರೆಡ್ಡಿ, ಸಂಚಾಲಕ ರಫೀಕ್, ವಿನೋದ್ ಕುಮಾರ್, ಮೂರ್ತಿ, ಬಂಗಾರಪೇಟೆ ಮಂಜುನಾಥ್ ಸೇರಿದಂತೆ ರೈತ ಸಂಘಗಳ ಮುಖಂಡರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.