• Fri. Apr 26th, 2024

ಅತ್ತಿಗಿರಿ ಚೆಕ್‍ಡ್ಯಾಂನ ಕಟ್ಟೆ ಒಡೆದು ನೀರು ವ್ಯರ್ಥವಾಗಿ ಹರಿದು ತಮಿಳುನಾಡು ಸೇರುತ್ತಿದೆ.

PLACE YOUR AD HERE AT LOWEST PRICE

ಬಂಗಾರಪೇಟೆ ತಾಲ್ಲೂಕು ಮಾಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅತ್ತಿಗಿರಿಕೊಪ್ಪ ಗ್ರಾಮದ ಚೆಕ್‍ಡ್ಯಾಂನ ಕಟ್ಟೆ ಒಡೆದು ಸುಮಾರು 10 ದಿನಗಳಿಂದ ನೀರು ವ್ಯರ್ಥವಾಗಿ ಹರಿದು ತಮಿಳುನಾಡು ಸೇರುತ್ತಿದೆ.

ಅತ್ತಿಗಿರಿ ಗ್ರಾಮದ ಬಳಿ ಸುಮಾರು 20 ವರ್ಷಗಳ ಹಿಂದೆ 2ಕೋಟಿ ವೆಚ್ಚದಲ್ಲಿ ಈ ಚೆಕ್‍ಡ್ಯಾಂ ನಿರ್ಮಿಸಲಾಗಿತ್ತು. ಈ ಚೆಕ್‍ಡ್ಯಾಂಗೆ ಹಲವು ಕೆರೆಗಳಿಂದ ನೀರು ಹರಿದು ಬಂದ ಶೇಖರಣೆಯಾಗುತ್ತಿತ್ತು.

ಇತ್ತೀಚೆಗೆ ಸುರಿದ ಭಾರಿ ಮಳೆಯುಂದಾಗಿ ಚೆಕ್‍ಡ್ಯಾಂ ಸತತವಾಗಿ ತುಂಬಿದ ಕಾರಣ ಶಿಥಿಲಾವಸ್ಥೆಯಲ್ಲಿದ್ದ ಚೆಕ್‍ಡ್ಯಾಂ ಕಟ್ಟೆ ಒಡೆದಿರುವ ಪರಿಣಾಮ ನೀರು ಹರಿದು ವ್ಯರ್ಥವಾಗುತ್ತಿದೆ.

ಕಟ್ಟೆ ಒಡೆದ ಪರಿಣಾಮ ಈ ಚೆಕ್‍ಡ್ಯಾಂನಿಂದ ಹರುಯುತ್ತಿರುವ ನೀರು ಕಾಮಸಮುದ್ರದ ವೃಷಭಾವತಿ ಕೆರೆಗೆ ಸೇರುತ್ತದೆ. ಈಗಾಗಲೆ ವೃಷಭಾವತಿ ಕೆರೆ ತುಂಬಿ ಕೋಡಿ ಹರಿಯುತ್ತಿರುವುದರಿಂದ ಈ ನೀರು ವ್ಯರ್ಥವಾಗಿ ತಮಿಳುನಾಡು ಸೇರುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗಮನಹರಿಸಿ ದುರಸ್ಥಿ  ಮಾಡಿದರೆ ನೀರನ್ನು ಉಳಿಸಬಹುದಾಗಿದೆ.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!