ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಬಂಗಾರಪೇಟೆ.
ದೊಡ್ಡವಲಗಮಾದಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಜೀವನ್ ರೆಡ್ಡಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ತಾಲೂಕಿನ ದೊಡ್ಡವಲಗಮಾದಿ ಗ್ರಾಮ ಪಂಚಾಯ್ತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಇದ್ದ ಆಲೀಂ ರವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು ಜೀವನ್ರೆಡ್ಡಿ ಮಾತ್ರ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು. ಎಂದು ಚುನಾವಣಾಧಿಕಾರಿಯಗಿದ್ದ ಬಿಇಒ ಸುಕನ್ಯ ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಈ ಹಿಂದೆ ಆಗಿದ್ದ ಒಪ್ಪಂದದಂತೆ ಆಲೀಂ ರಾಜೀನಾಮೆ ನೀಡಿದರು, ಈಗ ಆ ಸ್ಥಾನವನ್ನು ಜೀವನ್ ರೆಡ್ಡಿ ಅಲಂಕರಿಸಿದ್ದಾರೆ.
ಅವಿರೋಧ ಆಯ್ಕೆ ಬಳಿಕ ಮಾತನಾಡಿದ ಜೀವನ್ ರೆಡ್ಡಿ ಅಧಿಕಾರ ಶಾಶ್ವತವಲ್ಲ ಅದು ಸಿಕ್ಕಾಗ ಗ್ರಾಮಗಳಿಗೆ ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡಿ ಶ್ರಮಿಸಬೇಕು. ಆಗಲೇ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದಕ್ಕೆ ಸಾರ್ಥಕವಾಗಲಿದೆ.
ಈ ನಿಟ್ಟಿನಲ್ಲಿ ನಾನು ಶಾಸಕರ ಸಹಕಾರದೊಂದಿಗೆ ಹಾಗೂ ಪಂ ಅಧ್ಯಕ್ಷರ ಮತ್ತು ಎಲ್ಲಾ ಸದಸ್ಯರ ಬೆಂಬಲದೊಂದಿಗೆ ರಾಜಕೀಯ ಮಾಡದೆ ಗ್ರಾಮಗಳ ಸಂಪೂರ್ಣ ಅಭಿವೃದ್ದಿಗೆ ಶ್ರಮಿಸುವೆ ಮತ್ತು ಸರ್ಕಾರದಿಂದ ಬರುವ ಅನುದಾನ ಹಾಗೂ ಸೌಲಭ್ಯಗಳನ್ನು ನೇರವಾಗಿ ಮಧ್ಯವರ್ತಿಗಳಿಲ್ಲದೆ ಅರ್ಹರಿಗೆ ತಲುಪಿಸುವೆ ಎಂದು ತಿಳಿಸಿದರು.
ಈ ವೇಳೆ ಪಂ ಅಧ್ಯಕ್ಷೆ ನಂದಿನಿ, ಮುಖಂಡ ವಿ.ಶೇಷು, ಮಾಜಿ ತಾಪಂ ಸದಸ್ಯ ರಾಜಣ್ಣ, ಸದಸ್ಯಚೌಡಪ್ಪ, ಅಂಬೇಡ್ಕರ್ ಸೇರಿದಂತೆ ಎಲ್ಲಾ ಸದಸ್ಯರು ಪಿಡಿಒ ಸರಸ್ವತಿ ಇದ್ದರು.