ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಜೈನ್ ಸಮುದಾಯದ ತೀರ್ಥ ಕ್ಷೇತ್ರಗಳನ್ನು ಜಾರ್ಖಂಡ್ ಸರ್ಕಾರ ರಕ್ಷಣೆ ಮಾಡದೇ ಧ್ವಂಸ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹುನ್ನಾರ ಮಾಡಿರುವುದನ್ನು ಖಂಡಿಸಿ ಜೈನ್ ಮಹಾ ಸಂಘದಿಂದ ಬಂಗಾರಪೇಟೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಗಿರಿರಾಜ ಶಿಖರವು ಜೈನರ ಪವಿತ್ರವಾದ ಪ್ರಾರ್ಥನಾ ಸ್ಥಳವಾಗಿದ್ದು ಪ್ರವಾಸಿತಾಣ ನಿರ್ಮಾಣದ ಹೆಸರಲ್ಲಿ ಸರ್ಕಾರ ಅದನ್ನು ಧ್ವಂಸ ಮಾಡಿರುವುದು ಖಂಡನೀಯವಾಗಿದೆ.
ಅದೇ ರೀತಿ ಜಾರ್ಖಂಡ್ ರಾಜ್ಯದಲ್ಲಿರುವ ಶ್ರೀ ಸಮ್ಮೇತಶಿಖರ ತೀರ್ಥವನ್ನು ಸಹ ಕೆಡವಿ ಸರ್ಕಾರ ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಲು ಘೋಷಣೆ ಮಾಡಿರುವುದು ದುಃಖದ ಸಂಗತಿಯಾಗಿದೆ.
ಇಲ್ಲಿ ಪ್ರವಾಸಿ ತಾಣವಾಗಿ ಮಾಡಿದರೆ ಸಮಾಜದ ವಿವಿಧ ಜನರು ಬರುವರು ಆಗ ಕ್ಷೇತ್ರ ಕಲುಷಿತಗೊಳ್ಳಲಿ, ಜೈನ ಸಮಾಜದ ಸಾಧು ಸಂತರು ಲೋಕ ಕಲ್ಯಾಣಕ್ಕಾಗಿ ಇಲ್ಲಿ ಸಾವಿರಾರು ವರ್ಷಗಳಿಂದ ತಪಸ್ಸು ಮಾಡುವರು ಇಂತಹ ಪ್ರವಿತ್ರ ಸ್ಥಳಗಳನ್ನು ಅಪವಿತ್ರಗೊಳಿಸಲು ಹೊರಟಿರುವುದು ಸಲ್ಲದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರವಾಸಿ ತಾಣದ ಹೆಸರಲ್ಲಿ ಪವಿತ್ರ ಸ್ಥಳಗಳಲ್ಲಿ ಬಾರ್,ರೆಸ್ಟೋರೆಂಟ್ ತೆರೆದು ಮೋಜು ಮಸ್ತಿಗೆ ಅವಕಾಶ ಸರಿಯಿಲ್ಲ ಜೈನರು ಶಾಂತಿ ಪ್ರಿಯರು ಅಶಾಂತಿ ಸೃಷ್ಟಿಸಬೇಡಿ ಎಂದರು.
ಈ ವೇಳೆ ಜೈನ್ ಮಹಾ ಸಂಘದ ಅಧ್ಯಕ್ಷ ಕಿಶನ್ ಲಾಲ್ ಓಸ್ವಲ್ ಮುಖಂಡರಾದ ದೇವಿ ಚಂದ ಬಾಂಟಿಯ, ಮಹಾವೀರ ಚಂದ ನಹಟ, ಡಿ.ಕಿಶೋರ್ ಕುಮಾರ್, ಮಹೇಂದ್ರ ಮತ್ತಿತರರು ಇದ್ದರು.