PLACE YOUR AD HERE AT LOWEST PRICE
ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ನೇತೃತ್ವವನ್ನು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಹಿರೇಕರಪ್ಪನಹಳ್ಳಿ ರಾಮಪ್ಪ, ಅವರು ವಹಿಸಿದರು. ರಾಜ್ಯ ಕಲಾಮಂಡಲಿ ಸಂಚಾಲಕರಾದ ಹಿರೇಕರಪನಹಳ್ಳಿ ಎಲ್ಲಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು.
ಸಂಚಾಲಕರಾದ ರಾಮಪ್ಪ ಮಾತನಾಡಿ ನಾವುಗಳು ಈ ಕಾರ್ಯಕ್ರಮ ಮಾಡುವ ಉದ್ದೇಶ ನಮ್ಮ ಸಂಘಟನೆಯ ತಾಲೂಕು ಸಂಚಾಲಕರಾದ ವೆಂಕಟರಾಜ್, ದಿನೇಶ್, ಇವರುಗಳು ನೂತನವಾಗಿ ವಕೀಲರಾಗಿರುವ ಕಾರಣ ಹಾಗೂ ಇವರು ಉತ್ತಮ ಸಮಾಜ ಸೇವೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸನ್ಮಾನವನ್ನು ಮಾಡುತ್ತಿದ್ದೇವೆ.
ಇದೇ ರೀತಿ ಸಮಾಜ ಸೇವಕ ನಿರಂಜನ್ ಅವರು ಸಹ ಉತ್ತಮ ಜನಸೇವೆ ಮಾಡುತ್ತಿರುವ ಕಾರಣ ಅವರ ಸೇವೆಯನ್ನು ಗುರುತಿಸಿ ಸನ್ಮಾನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣ ಸಂಘಟನೆ ಹೋರಾಟ ಈ ಮೂರು ಸೂತ್ರಗಳನ್ನು ನೀಡಿದ್ದು, ದಲಿತರು ಮೊದಲು ಶಿಕ್ಷಣದಿಂದ ಮೇಲೆ ಬರಬೇಕು. ಆಗ ತಾನಾಗೆ ದಲಿತರು ಉದ್ಧಾರವಾಗುತ್ತಾರೆ.
ಇಂದು ನಮ್ಮ ಸಂಘಟನೆಯ ಸಂಚಾಲಕರಾದ ವೆಂಕಟರಾಜ್ ಹಾಗೂ ದಿನೇಶ್ ಅವರು ನೂತನವಾಗಿ ವಕೀಲರಾಗಿ ನಮ್ಮ ದಲಿತ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿ ನಮ್ಮ ದಲಿತರು ಶಿಕ್ಷಣದಲ್ಲಿ ಉನ್ನತ ಮಟ್ಟಕ್ಕೆ ಹೋದರೆ ನಮ್ಮ ಸಂಘಟನೆಯಿಂದ ವಿಶೇಷ ಸನ್ಮಾನ ಗೌರವಗಳೊಂದಿಗೆ ಕಾರ್ಯಕ್ರಮವನ್ನು ಏರ್ಪಡಿಸಿ ನಮ್ಮ ಸಂಘಟನೆ ಧ್ವನಿ ಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಪಟ್ಟಂತಹ ಕ್ರಾಂತಿ ಗೀತೆಗಳನ್ನು ಹಾಡಲಾಯಿತು. ಈ ಕಾರ್ಯಕ್ರಮದಲ್ಲಿ ಚಿಕ್ಕ ವಲಗಮಾದಿ ಲಕ್ಷ್ಮಮ್ಮ, ಗುಲ್ಲಹಳ್ಳಿ ಬಸಪ್ಪ ದೊಡ್ಡಕಾರಿ ರಾಧಾಕೃಷ್ಣ, ಬಡಮಾಕನಹಳ್ಳಿ ವೆಂಕಟೇಶಣ್ಣ, ಸಂಗನಹಳ್ಳಿ ರಮೇಶ್, ಅತ್ತಿಗಿರಿ ಕೊಪ್ಪ ರವೀಂದ್ರ, ಕೊಂಡಹಳ್ಳಿ ವೆಂಕಟ ಗಿರಿ, ದೇವಗಾನಹಳ್ಳಿ ವೆಂಕಟೇಶ್, ಬೇತಮಂಗಳ ರಮೇಶ್, ಕೊಂಡಗನಹಳ್ಳಿ ರಾಮಪ್ಪ, ಬೂದಿಕೋಟೆ ಶ್ರೀನಿವಾಸ್, ಬೆಟ್ಟಕೂರು ಚಲಪತಿ, ಹೊಸೂರು ಮುರಳಿ, ಸೂಲಿಕುಂಟೆ ವೆಂಕಟರಾಮಪ್ಪ, ಹುಣಸನಹಳ್ಳಿ ವಿಜಿ ಕುಮಾರ್ ಮೊದಲಾದವರಿದ್ದರು.