PLACE YOUR AD HERE AT LOWEST PRICE
ಸಮಾಜದಲ್ಲಿ ಒಳಗೊಳ್ಳುವಿಕೆ ಇಲ್ಲವಾಗಿ, ಧರ್ಮದ ಹೆಸರಿನಲ್ಲಿ ಶೋಷಣೆ ಮಾಡಲು ಕರ್ನಾಟಕ ಪ್ರಯೋಗಾಲಯವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೈಭೀಮ್ ಚಂದ್ರು ಖ್ಯಾತಿಯ ಜಸ್ಟೀಸ್ ಕೆ.ಚಂದ್ರು ಆತಂಕ ವ್ಯಕ್ತಪಡಿಸಿದರು.
ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಬುಧವಾರ ಅಖಿಲ ಭಾರತ ವಕೀಲರ ಒಕ್ಕೂಟ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಂಯುಕ್ತಾಶ್ರಯದಲ್ಲಿ ನ್ಯಾಯಮೂರ್ತಿ ಜೈಭೀಮ್ ಕೆ.ಚಂದ್ರು ಹಾಗೂ ಹಿರಿಯ ಪತ್ರಕರ್ತ ವಿಶ್ವಕುಂದಾಪುರ ರವರ ಕೃತಿ ಬಿಡುಗಡೆ ಮತ್ತು ಮಹಿಳೆಯರಿಗೆ ಶೀಘ್ರ ನ್ಯಾಯಕ್ಕಾಗಿ ಸುಧಾರಣೆಗಳು ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಜಾಬ್, ಹಲಾಲ್, ಆಜಾನ್ ಬಗ್ಗೆ ತಕರಾರು ತೆಗೆಯುವ ಮೂಲಕ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ವಿಷಕಾರಿ ಚಿಂತನೆಗಳ ಬೀಜ ಬಿತ್ತಲಾಗುತ್ತಿದೆ, ಹಿಜಾಬ್ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಸಲುವಾಗಿ ಪರೀಕ್ಷೆ ಬರೆಯಲೂ ಬಿಡಲಿಲ್ಲ. ಇದು ಸಂವಿಧಾನ ವಿರೋಧಿ ಧೋರಣೆಯಾಗಿದೆ. ಇದರಿಂದ ಸಮಾಜ ಇಂದು ಒಳಗೊಳ್ಳುವಿಕೆಯ ಭಾವನೆಗಳನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಸಮಾಜದಲ್ಲಿ ಮಹಿಳಾ ದೇವರನ್ನು ಪೂಜಿಸುತ್ತೇವೆ. ಆದರೆ, ಕೆಲ ದೇಗುಲಗಳಲ್ಲಿ ಮಹಿಳೆಯರಿಗೆ ಏಕೆ ಪ್ರವೇಶವೇ ನೀಡುವುದಿಲ್ಲವೇಕೆ ಎಂದು ಪ್ರಶ್ನಿಸಿದರ ಅವರು, ಮಹಿಳೆಯರು ದೇಗುಲದ ಪೂಜಾರಿ ಅಥವಾ ಅರ್ಚಕರಾಗಬಾರದೆಂದು, ದೇಗುಲ ಪ್ರವೇಶ ಮಾಡಬಾರದೆಂದು ಯಾವುದೇ ಕಾನೂನಿನಲ್ಲಿ ಇಲ್ಲ. ಮಹಿಳೆಯರು ಪೂಜೆ, ಆಚರಣೆ ಮಾಡುತ್ತಿದ್ದ ಉಲ್ಲೇಖ ವೇದಗಳಲ್ಲೂ ಇದೆ. ಅದೇರೀತಿ ಲಿಂಗ, ಜಾತಿ, ಧರ್ಮ ತಾರತಮ್ಯ ಮಾಡದೆ ಎಲ್ಲರೂ ಸಮಾನರು ಎಂಬುದಾಗಿ ಸಂವಿಧಾನದಲ್ಲಿ ಅಂಬೇಡ್ಕರ್ ಬರೆದಿದ್ದಾರೆ ಎಂದರು.
ಇದೇ ವೇಳೆ ತಮ್ಮ ಅನುಭವದ ಒಂದು ಘಟನೆಯನ್ನು ನೆನಪಿಸುತ್ತಾ, ಜೈಭೀಮ್ ಸಿನಿಮಾದಲ್ಲಿ ಅಭಿನಯಿಸಿದ ಹೆಣ್ಣು ಮಗಳನ್ನು ಹಲವಾರು ಸಮುದಾಯ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದವು. ಒಂದು ಸಮಾರಂಭದಲ್ಲಿ ನನ್ನನ್ನು ಕರೆದು ಆ ಹೆಣ್ಣು ಮಗಳ ಕುರಿತು ಎರಡು ನಿಮಿಷದಲ್ಲಿ ಮಾತನಾಡಲು ಹೇಳಲಾಯಿತು. ನಾನು ಹೇಳಿದೆ ” ಇಂದು ನೀವು ಕರೆದು ಅಭಿನಂಧಿಸಿದ ಈ ಹಣ್ಣು ಮಗಳು ಅಭಿನಂದನಾರ್ಹಳು ಯಾಕೆಂದರೆ ಅವಳ ಅಭಿನಯ ಅವಳಿಗೆ ಈ ಗೌರವ ತಂದು ಕೊಟ್ಟಿದೆ.ಹಾಗಾಗಿ ಆ ಪಾತ್ರದಾರಿ ಹೆಣ್ಣು ಮಗಳನ್ನು ನಿಮ್ಮ ಮನೆಯ ಮುಂಬಾಗಿಲು ತೆರೆದು ನಡು ಮನೆಯಲ್ಲಿ ಸೋಫಾ ಮೇಲೆ ಕುಳ್ಳಿರಿಸಿದ್ದೀರಿ,ಅದೇ ಸ್ಥಳದಲ್ಲಿ ಆ ಪಾತ್ರದ ನಿಜವಾದ ಹೆಣ್ಣು ಮಗಳು ಬಂದರೆ ನೀವು ನಿಮ್ಮ ನಡು ಮನೆಯ ಸೋಫಾ ಮೇಲೆ ಕುಳ್ಳಿರಿಸುತ್ತೀರಾ” ಇಲ್ಲಾ, ಏಕೆಂದರೆ ರೀಲ್ ಮತ್ತು ರಿಯಲ್ ಎಂಬುದ ನಡುವೆ ದೊಡ್ಡ ಅಂತರವಿದೆ. ಎಲ್ಲಿವರೆಗೆ ಈ ಅಂತರ ತೆಗೆಯಲು ಸಾಧ್ಯವಿಲ್ಲವೋ ಅಲ್ಲಿಯವರೆಗೂ ಸಾಮಾಜಿಕ ನ್ಯಾಯ ಅನ್ನುವುದಕ್ಕೆ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟರು
ಇದನ್ನೂ ಓದಿ : ನೂತನ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಎನ್.ಗಾಯತ್ರಿರಿಗೆ ಶಾಸಕ ಎಸ್.ಎನ್.ರಿಂದ ಸನ್ಮಾನ.