PLACE YOUR AD HERE AT LOWEST PRICE
ಜಿಲ್ಲೆಯಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಬಳಗದ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಭಾನುವಾರ ಕೋಲಾರ ತಾಲ್ಲೂಕು ಹುತ್ತೂರು ಹೋಬಳಿ ಮಟ್ಟದ ಸಭೆ ನಡೆಸಲಾಯಿತು.
ಸಭೆಯಲ್ಲಿ ರೇಣುಕಾ ಯಲ್ಲಮ್ಮ ಬಳಗದ ಜನರು ಸಾಮಾಜಿ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬಗ್ಗೆ ಅಭಿವೃದ್ಧಿಗೆ ಪೂರಕವಾದ ಚರ್ಚೆ ನಡೆಸಲಾಯಿತು. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಎಲ್ಲಾ ತಾಲ್ಲೂಕು ಹಾಗೂ ಹೋಬಳಿಗಳಲ್ಲಿ ಸಭೆಗಳು ನಡೆಯುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಗ್ರಾಮ ಶಾಖೆಗಳನ್ನು ಸಹ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮುದಾಯದ ಹಿರಿಯರಾದ ಕೆಂಬೋಡಿ ರತ್ನಪ್ಪ, ಕಾಳಹಸ್ತಿಪುರ ಅಂಬರೀಶ್ .ರಾಮಸಂದ್ರ ಪ್ರತಾಪ್, ಪಾರೆಹೊಸಹಳ್ಳಿ ರಮೇಶ್, ಸಿಸಂದ್ರ ಪ್ರಸನ್ನ, ವಿಟಪ್ಪನಹಳ್ಳಿ ಶ್ರಿನಿವಾಸ್. ಅಜಪ್ಪನಹಳ್ಳಿ ಪ್ರದಿಪ್, ಚದಮನಹಳ್ಳಿ ಶ್ರಿರಾಮ್, ನಂದoಬಳ್ಳಿ ವಿಜಿ, ಚಿನ್ನಯ್ಯ ಕೆ.ಎನ್.ಪ್ರಸನ್ನ, ಕೆಂಬೊಡಿ ರವಿ, ಸಿಳೆಂಗೆರೆ ಆನಂದ್, ಮಂಜು, ಬಟ್ರಹಳ್ಳಿ ಸುರೇಶ್, ಪಟ್ನ ಚೀನಯ್ಯ ಮುಂತಾದವರು ಭಾಗವಹಿಸಿದ್ದರು.