PLACE YOUR AD HERE AT LOWEST PRICE
ಕೆ.ಜಿ.ಎಫ್. ನಗರದ ಸಲ್ಡಾನ ವೃತ್ತದಿಂದ ರೋಡ್ಜರ್ಸ್ ಕ್ಯಾಂಪ್ ವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ದೂರುಗಳು ಬಂದ ಹಿನ್ನೆಲೆ ಶಾಸಕಿ ಡಾ.ರೂಪಕಲಾ ಎಂ.ಶಶಿಧರ್ ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ನಗರ ನೀರು ಸರಬರಾಜು ಮಂಡಳಿಯವರು ನೀರು ಸರಬರಾಜು ಮಾಡುವ ಪೈಪುಗಳನ್ನು ಸ್ಥಳಾಂತರಿಸುವ ಕಾಮಗಾರಿ ಪೂರ್ಣಗೊಳಿಸದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರ ಸಭೆ ವತಿಯಿಂದ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಕೂಡಲೆ ಪೂರ್ಣಗೊಳಿಸಲು ಸೂಚಿಸಿ, ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ತಮ್ಮ ಕರ್ತವ್ಯದಲ್ಲಿ ಬದ್ಧತೆಯನ್ನು ತೋರಿಸಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅದ್ಯಕ್ಷ ವಳ್ಳಲ್ .ಮುನಿಸ್ವಾಮಿ ಪೌರಾಯುಕ್ತೆ ಅಂಬಿಕ ಸದಸ್ಯರಾದ ರಮೇಶ್ ಜೈನ್, ಶಾಲಿನಿ ನಂದಕುಮಾರ್, ವೇಣುಗೋಪಾಲ್, ಪ್ರವೀಣ್ ಕುಮಾರ್, ನಗರಸಭೆ ಎ.ಇ.ಇ. ಮಂಜುನಾಥ್, ಲೋಕೋಪಯೋಗಿ ಇಲಾಖೆ ಎಇ ರಾಜಶೇಖರ್ ಮುಖಂಡರಾದ ದಯಾಶಂಕರ್, ಅನ್ಬು, ನೌಷಾದ್, ಆನಂದ್, ಚರ್ಲಸ್, ಇರ್ಬಾಸ್ ಹಾಗೂ ಪ್ರಮುಖ ಮುಖಂಡರು ಹಾಜರಿದ್ದರು.