PLACE YOUR AD HERE AT LOWEST PRICE
ಕೋಲಾರ ಕುವೆಂಪು ನಗರದ ಕನಕ ವಿಧ್ಯಾರ್ಥಿ ನಿಲಯದಲ್ಲಿ ಕೋಲಾರ ಜಿಲ್ಲಾ ಕುರುಬರ ಸಂಘದ ವತಿಯಿಂದ ಕುರುಬ ಸಮಾಜದ ಮುಖಂಡರಾದ ಆರ್.ಮುನಿರಾಜುರವರ ೫೧ನೇ ಹುಟ್ಟು ಹಬ್ಬವನ್ನ್ಬು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ ಆರ್.ಮುನಿರಾಜುರವರನ್ನು ಸನ್ಮಾನಿಸಿ ಗೌರವಿಸಿದರು.
ಸಮಾಜ ಸೇವಕ ಹಾಗೂ ಆಹಾರ ಗುತ್ತಿಗೆದಾರ ಆರ್.ಮುನಿರಾಜುರವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜದ ಒಳಿತಿಗಾಗಿ ನಾನು ಸಾಕಷ್ಟು ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಮುಂದೆಯು ಸಹ ಮಾಡುತ್ತೇನೆ, ವಿಧ್ಯಾರ್ಥಿ ನಿಲಯದ ವಿಧ್ಯಾರ್ಥಿಗಳು ಚೆನ್ನಾಗಿ ಓದಿ ಮುಂದೆ ಉನ್ನತ ಹುದ್ದೆಗಳನ್ನು ಸೇರಬೇಕು ನಿಮಗೆ ಯಾವುದೇ ಸಹಾಯಬೇಕಾದಲ್ಲಿ ನಾನು ನೀಡಲು ಸಿದ್ದನಿದ್ದೇನೆ ಎಂದರು ಹಾಗೂ ಜಿಲ್ಲಾ ಕುರುಬರ ಸಮುದಾಯ ಭವನ ನಿರ್ಮಾಣ ಹಂತದಲ್ಲಿದ್ದು ಸಮುದಾಯ ಭವನಕ್ಕೆ ೧.೫ ಲಕ್ಷ ರೂ ದೇಣಿಗೆ ನೀಡಿದರು ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕುರುಬ ಸಮುದಾಯದ ಮುಖಂಡರಾದ ಮಧುಸೂದನ್, ಕೆಎಸ್ಆರ್ಟಿಸಿ ಮುನಿಯಪ್ಪ, ನಡುಪಳ್ಳಿ ಕೃಷ್ಣಮೂರ್ತಿ, ಜೆಕೆ ಜಯರಾಮ್, ಪರಮೇಶ್, ಕೆ.ಎನ್.ಸರಸ್ವತಿ, ಜನಾರ್ಧನ್, ಕೋಡಿರಾಮಸಂದ್ರ ಮುನಿಸ್ವಾಮಿ, ಹೂವಳ್ಳಿ ಚಂದ್ರು, ಗಿಡ್ಡಪ್ಪ, ಎನ್.ಮುನಿರಾಜು, ಹರೀಶ್, ರಮೇಶ್, ಸಂದೀಪ್, ಚಂದ್ರು ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಓದಿ ಹಂಚಿ: