• Fri. Apr 26th, 2024

ಕೋಲಾರ I ದಲಿತ ಸಂಘಟನೆಗಳ ತತ್ವ ಸಿದ್ಧಾಂತಗಳಿಗೆ ವಿರುದ್ದವಾಗಿ ನಿಲುವುಗಳನ್ನು ಕೈಗೊಳ್ಳುತ್ತಿರುವ ಮುಖಂಡರಿಗೆ ಎಚ್ಚರ

PLACE YOUR AD HERE AT LOWEST PRICE

  • ಫೆ.೧೮ ಕೋಲಾರ ನಗರದಲ್ಲಿ ಮತ್ತೊಂದು ಸಭೆ.

ಕೋಲಾರ ಜಿಲ್ಲೆಯಲ್ಲಿ ಕೆಲವು ದಲಿತ ಮುಖಂಡರು ಒಂದು ಪಕ್ಷದ ಪರವಾಗಿ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿರುವ ರಾಜಕೀಯ ತೀರ್ಮಾನಗಳಿಗೆ ದಲಿತ ಸಂಘಟನೆಗಳು ಬೆಂಬಲವಿಲ್ಲ ಎಂದು ಶುಕ್ರವಾರ ನಡೆದ ದಲಿತ ಸಂಘಟನೆಗಳ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನ ತೆಗೆದುಕೊಳ್ಳಲಾಯಿತು.

ಕೋಲಾರ ನಗರದ ಕುವೆಂಪು ಬಡಾವಣೆಯಲ್ಲಿವ ರೈತ ಸಂಘದ ಕಚೇರಿಯಲ್ಲಿ ಜಿಲ್ಲೆಯ ದಲಿತ ಪರ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಮುಖಂಡರುಗಳು, ಕೋಲಾರ ಜಿಲ್ಲೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದ ಘಟಬಂದನ್‌ನಲ್ಲಿ ಕೆಲವು ದಲಿತ ಮುಖಂಡರು ಒಗ್ಗೂಡಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಪಕ್ಷದ ಪರವಾಗಿ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ದಲಿತ ವಿರೋಧಿಯಾಗಿದ್ದು, ಚುನಾವಣೆಯಲ್ಲಿ ಇಂತಹ ದಲಿತ ಮುಖಂಡರಿಗೆ ತಕ್ಕ ಪಾಠ ಕಲಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಘಟಬಂಧನ್ ಜೊತೆ ಕೈಜೋಡಿಸಿರುವ ದಲಿತ ಮುಖಂಡರ ತಂಡವು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದರು ಅವತ್ತು ಅವರನ್ನು ನಾವೇ, ಸೋಲಿಸಿದ್ದು ಇವರನ್ನು ನಾವೇ ಗೆಲ್ಲಿಸಿದ್ದು ಅಂತ ಸಂಭ್ರಮಾಚರಣೆ ನಡೆಸಿದ್ದು ಜಗಜ್ಜಾಹೀರಾಗಿದೆ ಆದರೆ, ಇದೀಗ ಅದೇ ತಂಡದವರು ದಲಿತ ಸಂಘಟನೆಗಳ ತತ್ವ ಸಿದ್ಧಾಂತಗಳಿಗೆ ವಿರುದ್ದವಾಗಿ ನಿಲುವುಗಳನ್ನು ಕೈಗೊಳ್ಳುತ್ತಿರುವುದು ಸಮಂಜಸವಲ್ಲವೆಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದ ಘಟಬಂದನ್ ನಾಯಕರೊಂದಿಗೆ ಕೆಲವು ದಲಿತ ಮುಖಂಡರು ಜೊತೆ ಕೈ ಜೋಡಿಸಿ ತಾವು ಹೇಳಿದ್ದೆ ಅಂತಿಮ ಅಂತಾ ರಾಜಕಾರಣವನ್ನು ಕಲುಷಿತ ಮಾಡುವ ಮೂಲಕ ಏಕಚಕ್ರಾಧಿಪತ್ಯ ಸ್ಥಾಪಿಸಲು ಮುಂದಾಗಿದ್ದು, ಇದಕ್ಕೆ ನಿಜವಾದ ದಲಿತ ಸಂಘಟನೆಗಳ ಮುಖಂಡರು ಅವಕಾಶ ನೀಡಬಾರದು ಅಂತಾ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಧಾರ ಕೈಗೊಳ್ಳಲಾಯಿತು.

ಘಟಬಂದನ್ ಮುಖಂಡರು ಹೇಳಿದಂತೆ ದಲಿತರು ಕಳೆದ ಎರಡು ಚುನಾವಣೆಗಳಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿಗೆ ಮತ ಹಾಕಿದ್ದು ದಲಿತ ಸಮುದಾಯಕ್ಕೆ ಏನು ಲಾಭವಾಗಿದೆ ದಲಿತ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಪಕ್ಷಗಳಿಗೆ ಬೆಂಬಲ ಕೊಡಬೇಕು ಇಲ್ಲದೇ ಹೋದರೆ ಚುನಾವಣೆಯನ್ನು ಬಹಿಷ್ಕಾರ ಪಡೆಸಬೇಕು ಅಂತ ಸಭೆಯಲ್ಲಿ ಚರ್ಚೆಗಳಾದವು. ಇದೇ ತಿಂಗಳು ೧೮ ರಂದು ಇದೇ ಸ್ಥಳದಲ್ಲಿ ಬೆಳಗ್ಗೆ ೧೧ ಗಂಟೆಗೆ ಮತ್ತೊಂದು ಸಭೆಯನ್ನು ಕರೆದು ಯಾವ ಪಕ್ಷವನ್ನು ಬೆಂಬಲಿಸಬೇಕು ಯಾರನ್ನು ಗೆಲ್ಲಿಸಬೇಕು ಅಂತ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಮುಖಂಡರು ತಿಳಿಸಿದರು.

ಸುದ್ದಿ ಓದಿ ಹಂಚಿ:

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!