PLACE YOUR AD HERE AT LOWEST PRICE
ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ತಮ್ಮ ಚುನಾವಣಾ ಪ್ರಚಾರಕ್ಕೆ ಭರತ ಹುಣ್ಣಿಮೆ ದಿನವಾದ ಭಾನುವಾರ ಅಧಿಕೃತವಾಗಿ ಚಾಲನೆ ನೀಡಿದರು.
ನಗರದ ಕಿಲಾರಿಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯ,ಮಾರಿಕಾಂಬ ದೇವಾಲಯ ಹಾಗೂ ಸತ್ಯಮ್ಮ ದೇವಾಲಯಗಳಲ್ಲಿ ಪೂಜೆ ನೆರವೇರಿಸಿದ ನಂತರ ಚುನಾವಣಾ ಪ್ರಚಾರ ಪ್ರಾರಂಭಿಸಿದರು.
ಜೆಡಿಎಸ್ ಮುಖಂಡರಾದ ವಕ್ಕಲೇರಿ ರಾಮು, ಯಾದವ ಸಮುದಾಯದ ಮುಖಂಡರುಗಳಾದ
ಮೇಸ್ತ್ರಿ ನಾರಾಯಣಸ್ವಾಮಿ, ಮುಕ್ಕಡ್ ವೆಂಕಟೇಶ್, ಹಾಗೂ ಅಲ್ಪಸಂಖ್ಯಾತ ಮುಖಂಡರಾದ ಎಲ್ ಕಲೀಲ್ ಅಹಮದ್ ಇಮ್ರಾನ್ ಪಾಷ, ನಗರಸಭಾ ಸದಸ್ಯ ಇದಾಯತ್ ಮೊದಲಾದವರ ನೇತೃತ್ವದಲ್ಲಿ ಕಿಲಾರಿ ಪೇಟೆ ಉಪ್ಪಾರಪೇಟೆ ಫಕೀರವಾಡ ವಾರ್ಡ್ಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ , ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ನೆಲೆಯಿದ್ದು ಕುಮಾರಸ್ವಾಮಿ ಅವರ ಜನಪದ ಕಾರ್ಯಕ್ರಮಗಳು ನಮಗೆ ಶ್ರೀರಕ್ಷೆಯಾಗಲಿವೆ ಎಂದರು.
ಈಗಾಗಲೇ ಜನತಾ ಜಲಧಾರೆ, ಪಂಚರತ್ನ ಯೋಜನೆಗಳ ಮೂಲಕ ಕುಮಾರಸ್ವಾಮಿ ಯವರು ರಾಜ್ಯದ ಸುಮಾರು ಎರಡು ಕೋಟಿ ಜನರನ್ನು ತಲುಪಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ನೇರವಾಗಿ ಜನರನ್ನು ಭೇಟಿಯಾಗುವ ಮೂಲಕ ಅವರಲ್ಲಿ ಉತ್ಸಾಹ ತುಂಬುತ್ತಿದ್ದಾರೆ. ಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಪೂರ್ಣ ಬಹುಮತದಿಂದ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ಎಂದರು.
ಕೋಲಾರದ ಮತದಾರರು ಸ್ವಾಭಿಮಾನಿಗಳಾಗಿದ್ದು, ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆಂಬ ವಿಶ್ವಾಸವಿದೆ. ನಿಮ್ಮಗಳ ಆಶೀರ್ವಾದ ಸಹಕಾರ ಇದ್ದರೆ ನಾನು ನವಕೋಲಾರದ ಸರ್ವತೋಮುಖ ಅಭಿವೃದ್ಧಿಗೆ ನಿರ್ಮಾಣಕ್ಕೆ ಶ್ರಮಿಸುವ ಮೂಲಕ ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಕುರುಬ ಜನಾಂಗದ ಮುಖಂಡ ಅಶೋಕ್, ಯಾದವ ಸಮುದಾಯದ ಮುಖಂಡ ಶಬರೀಶ್ ಯಾದವ್, ರೋಟರಿ ಕ್ಲಬ್ ಸುಧಾಕರ್, ಮೈನಾರಿಟಿ ಮುಖಂಡ ಹಬೀಬ್, ಇದ್ದರು.