PLACE YOUR AD HERE AT LOWEST PRICE
ಕೆಜಿಎಫ್:ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಡಾ.ರಮೇಶ್ ಬಾಬು ಆರೋಪ ಮಾಡಿದರು.
ವೆಂಗಸಂದ್ರ ಗ್ರಾಪಂಯ ಕೋಡಿಗೆನಹಳ್ಳಿ ಗ್ರಾಮದ ಪ್ರತಿ ಮನೆ-ಮನೆಗೂ ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿ ಜೆಡಿಎಸ್ ಪಕ್ಷಕ್ಕೆ ಒಂದು ಅವಕಾಶ ಕಲ್ಪಿಸಿ ಎಂದು ಕೋರಿ ಮಾತನಾಡಿದರು.
ರಾಜ್ಯವನ್ನು ಹಾಗೂ ಕೆಜಿಏಫ್ ಕ್ಷೇತ್ರವನ್ನು ಆಡಳಿತ ಮಾಡಿದ ರಾಷ್ಟ್ರೀಯ ಪಕ್ಷಗಳ ಜನಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ಧಿಯನ್ನು ಮರೆತು ವೈಯಕ್ತಿಕ ಅಭಿವೃದ್ಧಿಯಾಗಿದ್ದಾರೆಂದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಮನೆಯಲ್ಲಿಯೂ ಒಬ್ಬರಿಗೆ ಸರಕಾರಿ ಉದ್ಯೋಗ ದೊರೆಯಲಿದೆ ಎಂದು ಭರವಸೆ ನೀಡಿದರು.
ಜೆಡಿಎಸ್ ಪಕ್ಷದಿಂದ ಮಾತ್ರ ನಿರುದ್ಯೋಗ ನಿವಾರಣೆಯಾಗಲು ಸಾಧ್ಯ ಎಂದರು. ಕ್ಷೇತ್ರದಲ್ಲಿ ಸಮಸ್ಯೆಗಳ ಹೆಚ್ಚು: ಕೆಜಿಏಫ್ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಭಾಗದ ಯಾವುದೇ ಹಳ್ಳಿಗೂ ಭೇಟಿ ನೀಡಿದರು,
ಗ್ರಾಮಗಳ ವಿವಿಧ ಬಗ್ಗೆಯ ಸಮಸ್ಯೆಗಳನ್ನು ಜನರು ಹೇಳಿಗೊಂಡು ನೋವು ಪಡುತ್ತಿದ್ದಾರೆಂದು ದೂರಿದ್ದರು. ಕ್ಷೇತ್ರದಲ್ಲಿ ಬಿಜೆಪಿ ಶಾಸಕರು 2 ಭಾರಿ ಹಾಗೂ ಕಾಂಗ್ರೆಸ್ ಶಾಸಕರು ಗೆದ್ದರು ಕ್ಷೇತ್ರದ ಜನತೆಗೆ ಏನು ಮಾಡಿಲ್ಲವೆಂದು ಕೋಡಿಗೆನಹಳ್ಳಿಗ್ರಾಮಸ್ಥರು ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಮುಂದೆ ನೋವು ತೋಡಿಕೊಂಡ ಪ್ರಸಂಗ ನಡೆಯಿತು.