• Sat. Apr 27th, 2024

PLACE YOUR AD HERE AT LOWEST PRICE

ಬಂಗಾರಪೇಟೆ: ಪಟ್ಟಣದ ವಿವೇಕಾನಂದನಗರದ ಬಳಿ ಕರ್ನಾಟಕ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಭೂ ಸಂತ್ರಸ್ತರ ರೈತರ ಹೋರಾಟ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಭೇಯಲ್ಲಿ ಮಾತನಾಡಿದ ಮುಖಂಡರು, ಭೂ ಸಂತ್ರಸ್ತ ರೈತರ ಬೇಡಿಕೆಗಳ ಪರಿಹಾರಕ್ಕೆ ಹಲವಾರು ಹೋರಾಟಗಳನ್ನು ಮಾಡಿ ಸರ್ಕಾರ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದಾಗ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ.

ಆದರೆ ಪಿ ನಂಬರ್ ಒಳಗೊಂಡಂತೆ ಇನ್ನೂ ಹಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿರುವುದಿಲ್ಲ. ಪಿ ನಂಬರ್ ವಿಚಾರದಲ್ಲಿ ಅನೇಕ ಬಾರಿ ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ಒತ್ತಾಯಿಸಿದರೂ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಮುಂದಾಗಲಿಲ್ಲ.

ಇತ್ತೀಚಿನ ಕೆಲವು ದಿನಗಳಿಂದ ಎಕ್ಸ್ ಪ್ರೇಸ್ ವೇ ವ್ಯಾಪ್ತಿಯಲ್ಲಿ ಹಲವಾರು ಹಳ್ಳಿಗಳ ಕಡೆ ಜಿಲ್ಲಾಡಳಿತ ಪಿ ನಂಬರ್ ಭೂಮಿಯನ್ನು ಪರಿಹಾರ ನೀಡದೆ ಭೂಸ್ವಾಧೀನ ಮಾಡಲು ಮುಂದಾದಾಗ ಅದನ್ನು ವಿರೋಧಿಸಿ ಸಂತ್ರಸ್ತ ರೈತರು ಪ್ರತಿರೋಧ ಒಡ್ಡಲು ಮುಂದಾಗಬೇಕಿದೆ.

ರೈತರ ಸಮಸ್ಯೆಗಳ ಪರಿಹಾರ ಆಗುವ ತನಕ ಜಿಲ್ಲಾಡಳಿತ, ಕಂದಾಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳನ್ನು ಬಳಸಿ ರೈತರ ಮೇಲೆ ದೌರ್ಜನ್ಯ ದಬ್ಬಾಳಿಕೆಯಿಂದ ಭೂಸ್ವಾಧೀನ ಮಾಡುವುದನ್ನು ಕೈಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಬೇಕಿದೆ.

ವಿಷ ಸೇವಿಸಿದ ರೈತರಿಗೆ ಚಿಕಿತ್ಸೆ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಬೇಕು. ಹೋರಾಟ ಸಮಿತಿ ಮುಖಂಡರನ್ನು ಒಳಗೊಂಡಂತೆ ಸಂತ್ರಸ್ತ ರೈತರ ಸಭೆಯನ್ನು ಕೂಡಲೇ ಕರೆದು ಇತ್ಯಾರ್ಥವಾಗದಿರುವ ಸಮಸ್ಯೆಗಳನ್ನು ಪರಿಹಾರ ಮಾಡಬೇಕು. ಆರ್ಬಿಟ್ರೇಷನ್ ಪ್ರಕರಣಗಳ ವಿಲೇ ಕಾರ್ಯವನ್ನು ತ್ವರಿತವಾಗಿ ಇತ್ಯರ್ಥ ಮಾಡಬೇಕೆಂದು ಒತ್ತಾಯಿಸಿದರು.

ಮೇಲ್ಕಂಡ ಬೇಡಿಕೆಗಳು ಒಳಗೊಂಡಂತೆ ಪಿ ನಂಬರ್ ಭೂಮಿಗೆ ಪರಿಹಾರ ನೀಡದ್ದಿದರೆ ದಿನಾಂಕ:22:2:23 ರಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟ ಹೋರಾಟ ಮಾಡಲು ಸಭೇಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷರಾದ ಕಲಾವಿದ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ್, ಕೆ.ಪಿ.ಆರ್.ಎಸ್ ನ ಜಿಲ್ಲಾ ಅಧ್ಯಕ್ಷರಾದ ಟಿ.ಎಂ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಪಾತಕೋಟಾ ನವೀನ್ ಕುಮಾರ್, ಮುಖಂಡರಾದ ಮಾಲೂರು ತಾಲ್ಲೂಕಿನ ಕೆ.ವೆಂಕಟಪ್ಪ, ಮುನಿಯಪ್ಪ, ತಿಮ್ಮರಾಯಪ್ಪ, ಕೃಷ್ಣಮೂರ್ತಿ, ರಾಮನಾಥ್, ಅಭಿಜಿತ್ ಗೌಡ, ಬಂಗಾರಪೇಟೆ ತಾಲ್ಲೂಕಿನ ಕಲ್ಲುಕೆರೆ ಬಾಬು, ರಾಮಚಂದ್ರಪ್ಪ, ಜಿ.ಡಿ.ರಂಗನಾಥ್, ಶ್ರೀರಾಮೇಗೌಡ, ರಾಮಕೃಷ್ಣಯ್ಯ, ಕೆ.ಜಿ.ಎಫ್ ತಾಲ್ಲೂಕಿನ ಮುನಿವೆಂಕಟೇಗೌಡ, ಅಪೋಜಿಗೌಡ ಮುಂತಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!