PLACE YOUR AD HERE AT LOWEST PRICE
ಬಂಗಾರಪೇಟೆ:ತನ್ನ ಪ್ರಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿಸಿ ಹೊಲದಲ್ಲಿ ಬಿಸಾಡಿರುವ ಘಟನೆ ದೋಣಿಮಡಗು ಗ್ರಾಪಂನ ತನಿಮಡಗು ಗ್ರಾಮದಲ್ಲಿ ನಡೆದಿದೆ.
ಕೊಲೆಗೀಡಾದ ವ್ಯಕ್ತಿಯನ್ನು ತನಿಮಡಗು ಗ್ರಾಮದ 50 ವರ್ಷದ ತಿಮ್ಮಪ್ಪ ಎಂದು ಗುರುತಿಸಲಾಗಿದ್ದು,ಮೃತ ತಿಮ್ಮಪ್ಪ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎನ್ನಲಾಗಿದ್ದು, ತಿಮ್ಮಪ್ಪ ಕೆಲ ತಿಂಗಳುಗಳ ಹಿಂದೆ ಕೂಲಿ ಕೆಲಸ ಮಾಡುವಾಗ ಕಾಲಿಗೆ ಗಾಯವಾಗಿ ಕೆಲಸ ಮಾಡಲು ಆಗದೆ ಮನೆಯಲ್ಲೆ ಇರುತ್ತಿದ್ದ ಎನ್ನಲಾಗಿದೆ.
ತಿಮ್ಮಪ್ಪನ ಪತ್ನಿ ವೆಂಕಟಮ್ಮ ತಮ್ಮ ಮಕ್ಕಳ್ನು ಹಾಗೂ ಗಂಡನನ್ನು ಸಾಕುತ್ತಿದ್ದಳು,ಇತ್ತೀಚಿಗೆ ಪತಿ ತಿಮ್ಮಪ್ಪ ಹೆಂಡ್ತಿಯ ನಡವಳಿಕೆ ಮೇಲೆ ಸಂಶಯ ವ್ಯಕ್ತಪಡಿಸಿ ಆಗಾಗ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಭಾನುವಾರ ಗ್ರಾಮದ ಹೊರವಲಯದಲ್ಲಿ ತಿಮ್ಮಪ್ಪ ಶವವ ಪತ್ತೆಯಾಗಿದ್ದು ಶವದ ಮೇಲೆ ಅಲ್ಲಲ್ಲಿ ಗಾಯಗಳಾಗಿವೆ.
ಇದು ಆಕಸ್ಮಿಕ ಸಾವಲ್ಲ, ಇದು ಪೂರ್ವ ಸಂಚಿನ ಕೊಲೆಯಗಿದೆ. ಈ ಘಟನೆಗೆ ನನ್ನ ಅತ್ತಿಗೆ ವೆಂಟಕಮ್ಮ ಮತ್ತು ಆಂದ್ರದ ಗುಡಿಪಲ್ಲಿ ಗ್ರಾಮದ ನಾಗರಾಜಪ್ಪ ರವರೇ ನೇರ ಕಾರಣಕರ್ತರು. ಅವರಿಬ್ಬರ ನಡುವೆ ಅಕ್ರಮ ಸಂಬಂಧವಿತ್ತು. ಗಂಡ ಹೆಂಡ್ತಿ ಇಬ್ಬರ ನಡುವೆ ಈ ಸಂಬಂಧದಿಂದಾಗಿ ಜಗಳ ನಡೆಯುತ್ತಿತ್ತು.
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ನನ್ನ ಅಣ್ಣನನ್ನು ಇವರಿಬ್ಬರೂ ಸೇರಿ ಕೊಲೆ ಮಾಡಿ ಹೊಲದಲ್ಲಿ ಬಿಸಾಡಿದ್ದಾರೆಂದು ಮೃತನ ತಂಗಿ ಆರೋಪಿಸಿದ್ದು, ಮೃತ ತಿಮ್ಮಪ್ಪ ಸಹೋದರ ಮಲ್ಲೇಶ್ ಕಾಮಸಮುದ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.