PLACE YOUR AD HERE AT LOWEST PRICE
ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಮತ್ತೊರ್ವ ಟಿಕೆಟ್ ಆಕಾಂಕ್ಷಿ ಸಿಂಗಪೂರ್ ಗೋವಿಂದುರ ಪರಿಶಿಷ್ಟ ಜಾತಿಗೆ ಸೇರಿದ ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ರದ್ದುಗೊಳಿಸಿದೆ.
ಈ ಹಿಂದೆ ಸಿಂಗಪೂರ್ ಗೋವಿಂದು ಮತ್ತು ಅವರ ಪುತ್ರ ಕೃಷ್ಣದೇವರಾಯರಿಗೆ ಬುಡ್ಗಜಂಗಮ ಜಾತಿ ಪ್ರಮಾಣ ಪತ್ರವನ್ನು ನೀಡಲಾಗಿತ್ತು. ಆದರೆ, ವಿಚಾರಣೆ ಸಂದರ್ಭದಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ಕುರಿತು ಯಾವುದೇ ದಾಖಲಾತಿಗಳು ಕಚೇರಿಯಲ್ಲಿ ಲಭ್ಯವಿರಲಿಲ್ಲ. ಇವರ ಸಹೋದರರು ಮತ್ತು ಇತರೆ ರಕ್ತ ಸಂಬಂಧಿಕರಿಗೆ ಜಾತಿ ಪ್ರಮಾಣ ಪತ್ರವನ್ನು ನೀಡಿರಲಿಲ್ಲ.
ಗುಪ್ತ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಸಿಂಗಾಪೂರ್ ಗೋವಿಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸಂಬಂಧಿಕರಾಗಿರುವುದು ದೃಢಪಟ್ಟಿರುವುದರಿಂದ ಹಾಗೂ ಪಡೆದುಕೊಂಡಿರುವ ಬುಡ್ಗಜಂಗಮ ಜಾತಿ ಪ್ರಮಾಣ ಪತ್ರವನ್ನು ಸಮರ್ಥಿಸಿಕೊಳ್ಳುವ ನೈಜ ದಾಖಲೆಗಳನ್ನು ನೀಡಲು ಸಾಕಷ್ಟು ಬಾರಿ ಅವಕಾಶ ನೀಡಿದರೂ ಉಪಯೋಗಿಸಿಕೊಳ್ಳಲಿಲ್ಲವೆಂಬ ಕಾರಣಕ್ಕೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ಬುಡ್ಗಜಂಗಮ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಈಗಾಗಲೇ ಅವರು ಪಡೆದುಕೊಂಡಿರುವ ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸುವಂತೆ ಮುಳಬಾಗಿಲು ತಹಸೀಲ್ದಾರ್ರಿಗೆ ಆದೇಶಿಸಿದೆ.
ಸುದ್ದಿ ಓದಿ ಹಂಚಿ: