• Sun. Apr 28th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಪಟ್ಟಣದ ದರ್ಗಾ ಟ್ರಸ್ಟ್ ವತಿಯಿಂದ ಇದೇ ಪೆಬ್ರವರಿ 19ರಿಂದ ಮೂರು ದಿನಗಳ ಕಾಲ 89ನೇ ಉರುಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಲ್ಲಾ ನಾಗರೀಕರು ಈ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಟ್ರಸ್ಟ್‍ನ ಖಜಾಂಚಿ ಆದಿಲ್ ಪಾಷ ತಿಳಿಸಿದರು.

ದರ್ಗಾ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉರುಸ್ ಕಾರ್ಯಕ್ರಮ ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತವಾಗಿದೆ. ಕಳೆದ 89ವರ್ಷಗಳಿಂದ ಎಲ್ಲಾ ಧರ್ಮಿಯರು ಸೇರಿ ಆಚರಣೆ ಮಾಡುವ ಉರುಸ್‍ಗೆ ಜಿಲ್ಲೆಯಲ್ಲೆ ಒಂದು ವಿಶಿಷ್ಟ ಸ್ಥಾನ ಮಾನವಿದೆ, ಈ ಉರುಸ್ ಕಾರ್ಯಕ್ರಮದಲ್ಲಿ ಮುಸ್ಲಿಂ ಭಾಂದವರ ಸಹಿತ ಬೇರೆ ಧರ್ಮದವರೂ ಹೆಚ್ಚು  ಭಾಗವಹಿಸುವ ಮೂಲಕ ಮಾದರಿಯಾಗಿದೆ.

ಜಾತಿ ಧರ್ಮ ಬೇಧ ಬಾವವಿಲ್ಲದೆ ಎಲ್ಲಾ ಧರ್ಮಿಯರು ಸೌಹಾರ್ದಯುತವಾಗಿ ಭಾಗವಹಿಸಲಿದ್ದು, ಈ ವರ್ಷ ಫೆ.19ರಿಂದ 21ರ ವರೆಗೂ ಮೂರು ದಿನಗಳ ಕಾಲ  ಉರುಸ್ ಹಮ್ಮಿಕೊಳ್ಳಲಾಗಿದೆ. 19ರಂದು ಸೊಂದಲ್ ಶೆರೀಫ್ ಮೆರವಣಿಗೆ ನಡೆಯಲಿದೆ, 20 ಮತ್ತು 21ರಂದು ದರ್ಗಾದ ಆವರಣದಲ್ಲಿ ಕವಾಲಿ ಕಾರ್ಯಕ್ರಮ ಇರುತ್ತದೆ ಎಂದು ತಿಳಿಸಿದರು.

ಬಂಗಾರಪೇಟೆ ಉರುಸ್ ಎಂದರೆ ಇಡೀ ಜಿಲ್ಲೆಯಲ್ಲೆ ಹೆಸರುವಾಸಿಯಾಗಿದೆ,ಉರುಸ್ ಕಾರ್ಯಕ್ರಮದಲ್ಲಿ ಹೊರ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯಲ್ಲಿ ಜನರು ಬಂದು ಭಾಗವಹಿಸುವರು.ಕಳೆದ ಎರಡು ವರ್ಷಗಳ ಕಾಲ ಕೊರೋನ ದಿಂದ ಸರಳವಾಗಿ ಆಚರಣೆ ಮಾಡಲಾಗಿತ್ತು.

ಈ ವರ್ಷ ಕೊರೋನಾ ಭೀತಿ ಇಲ್ಲದ ಕಾರಣ ಅದ್ದೂರಿಯಾಗಿ ಆಚರಣೆ ಮಾಡಲಾಗುವುದು,ಉರುಸ್‍ನಲ್ಲಿ ಅನ್ಯ ಧರ್ಮಿಯರಿಗೆ ಅಗೌರವ ಉಂಟಾಗುವಂತಹ ಸನ್ನಿವೇಶಗಳನ್ನು ಯಾರೂ ಸೃಷ್ಟಿಸಬಾರದು ಮೂರು ದಿನಗಳು ಶಾಂತಿ ಸೌಹಾರ್ದತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಈ ವೇಳೆ ಟ್ರಸ್ಟ್‍ನ ಅಧ್ಯಕ್ಷ ಶಂಷುದ್ದಿನ್ ಬಾಬು,ಉಪಾಧ್ಯಕ್ಷ ಗುಲ್ಜರ್,ಖಲೀಲ್ ಮತ್ತಿತರರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!