PLACE YOUR AD HERE AT LOWEST PRICE
ಬಂಗಾರಪೇಟೆ:ಕವಿ, ತ್ರಿಪದಿ ಬ್ರಹ್ಮ ಶ್ರೀ ಸರ್ವಜ್ಞರ ಜಯಂತಿಯನ್ನು ಡಿ.ಕೆ ಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಕಲಾವತಿ ರಮೇಶ್ ಮಾತನಾಡಿ ಸರ್ವಜ್ಞ ಕವಿಗಳು ತ್ರಿಪದಿಗಳ ಮೂಲಕ ಜನಜೀವನ ಹೇಗಿರಬೇಕು ಎಂದು ನಮಗೆ ಹೇಳಿದ್ದಾರೆ.
ಅವರ ತ್ರಿಪದಿಗಳಲ್ಲಿ ಎಲ್ಲಾ ಜನರೂ ಅನ್ಯೋನ್ಯದಿಂದ ಸಂತೋಷವಾಗಿ ಜೀವಿಸಬೇಕು, ಸೋಮಾರಿತನವಿಲ್ಲದ ಮತ್ತು ತಾರತಮ್ಯವಿಲ್ಲದ ಜೀವನವೇ ಉತ್ಥಮ ಜೀವನವಾಗಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿ ಅದ್ಯಕ್ಷ ಬಾಬು, ಉಪಾಧ್ಯಕ್ಷರಾದ ರಾಧಮ್ಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಭಾಸ್ಕರ್ ಕಾರ್ಯದರ್ಶಿಗಳಾದ ದಾದಾಪೀರ್ ಮೊದಲಾದವರು ಮಾತನಾಡಿದರು.
ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರಾದ ಸವಿತಾ ಬಾಬು, ಟಿ ವೆಂಕಟೇಶ್, ಗಣೇಶ್, ಮಹದೇವ, ಭೋಸ್ಲೆ, ಸಮಾಜದ ಹಿರಿಯ ಮುಖಂಡರು ನಿವೃತ್ತ ಪೊಲೀಸ್ ಎಎಸ್ಐ ಕೆ.ಎಲ್ ಮುರುಗೇಶ್, ಮುಖಂಡರಾದ ಕೆ. ವಿನಾಯಕ, ನಾರಾಯಣಸ್ವಾಮಿ, ಶ್ರೀನಿವಾಸ್ ಯುವ ಮುಖಂಡರಾದ ಶೋಬಿನ್ ಹಾಗೂ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.