PLACE YOUR AD HERE AT LOWEST PRICE
ಕೆಜಿಎಫ್:ಸ್ವಾಮಿ ವಿವೇಕಾನಂದ ಬ್ರಿಗೇಡ್ ವತಿಯಿಂದ ಸುಂದರಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾವಳಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಈ ಟೂರ್ನಿಯನ್ನು ಟಿಎಪಿಎಂಸಿಎಸ್ ಅಧ್ಯಕ್ಷ ವೈ.ಎಸ್.ಪ್ರವೀಣ್ ಕುಮಾರ್ ನೇತೃತ್ವ ವಹಿಸಿಕೊಂಡು ಟ್ರೋಪಿಗಳು, ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು.
ಪ್ರಥಮ ಬಹುಮಾನವನ್ನು ಸುಂದರಪಾಳ್ಯ ಸಚಿನ್ ಬ್ಲಾಸ್ಟರ್ಸ್ 15 ಸಾವಿರ ಮತ್ತು ಟ್ರೋಫಿ, ದ್ವಿತೀಯ ಬಹುಮಾನವನ್ನು ನ್ಯೂ ಟೌನ್ ಬೇತಮಂಗಲ, 8 ಸಾವಿರ ತೃತೀಯ ಬಹುಮಾನವನ್ನು ಕೆಜಿಎಫ್ ಯೂತ್ಸ್ 3 ಸಾವಿರ ಪಡೆದುಕೊಂಡರು.
ಮೊದಲ ಬಹುಮಾನವನ್ನು ಎನ್.ಜಿ.ಹುಲ್ಕೂರು ಗ್ರಾಪಂ ಅಧ್ಯಕ್ಷ ಸುನೀಲ್, ಗುತ್ತಿಗೆದಾರ ಲಚ್ಚಿ ಸ್ವಾಮಿ, ಗ್ರಾಪಂ ಸದಸ್ಯ ಪ್ರಸಾದ್, ಮುರಳಿ ಮತ್ತು ನಾರಾಯಣಸ್ವಾಮಿ. ದ್ವಿತೀಯ ಬಹುಮಾನವನ್ನು ಹರೀಶ್, ಮಂಜುನಾಥ್, ಜೆಸಿಬಿ ಮುನಿಯಪ್ಪ. ತೃತೀಯ ಬಹುಮಾನವನ್ನು ತಾಪಂ ಮಾಜಿ ಸದಸ್ಯ ಡಾ.ಕೃಷ್ಣಮೂರ್ತಿ ಕೊಡುಗೆಯಾಗಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಕ್ರೀಟಾಪಟುಗಳು, ಯುವಕರು ಇತರರು ಉಪಸ್ಥಿತರಿದ್ದರು.