PLACE YOUR AD HERE AT LOWEST PRICE
ಗುರು ಶಿಷ್ಯರ ಹಂಗಿಲ್ಲದೆ, ಪೂರ್ವ ತಾತ್ವಿಕತೆಯ ಪೀಡಿತರಾಗದೆ ಪ್ರತಿ ಹೆಜ್ಜೆಯಲ್ಲಿಯೂ ಸರಿ ದಾರಿ ಹುಡುಕಾಟ ನಡೆಸಿದ ಅಲ್ಲಮ ಪ್ರತ್ಯೇಕ ಬುದ್ಧ, ಅಲ್ಲಮ ವಚನಗಳು ಒಂದು ಬಾರಿ ಓದಿದರೆ ದಕ್ಕುವುದಲ್ಲ ಎಂದು ಸಾಹಿತಿ ನಟರಾಜ್ ಬೂದಾಳ್ ಹೇಳಿದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಓದುಗ ಕೇಳುಗ ೨೩ ನೇ ಕಾರ್ಯಕ್ರಮದಲ್ಲಿ ಎಲ್.ಬಸವರಾಜು ಅವರ ಅಲ್ಲಮ ಚಂದ್ರಿಕೆ ಪುಸ್ತಕ ಕುರಿತು ಅವರು ಉಪನ್ಯಾಸ ನೀಡಿದರು.
ಮನಸ್ಸಿನಲ್ಲಿರುವ ಸಂಪತ್ತನ್ನು ತೆರೆದು ನೋಡಬೇಕೆಂದು ಬುದ್ಧ ಹೇಳಿದ, ವಿಶ್ವ ವ್ಯಾಪಿಯಾದ ಸಂತತನ ಬದುಕಿನ ದೊಡ್ಡ ಸಮೃದ್ಧಿ ಇಂತದ್ದನ್ನು ಅಲ್ಲಮರಿಂದ ಹುಡುಕಿ ಕೊಟ್ಟವರು ಎಲ್.ಬಸವರಾಜು ಎಂದು ವಿವರಿಸಿ, ವಚನಗಳು ಲಿಂಗಾಯಿತ, ವೀರಶೈವರದೆಂಬ ತಪ್ಪು ಕಲ್ಪನೆ ಸಾಹಿತ್ಯ ಲೋಕದಲ್ಲಿದೆ ಎಂದರು.
ಅಲ್ಲಮ ದೈವ ಮಾರ್ಗವನ್ನು ತಿರಸ್ಕರಿಸಿ ಗುರು ಮಾರ್ಗವನ್ನು ಒಪ್ಪಿಕೊಂಡವರು, ಗುರು ಎಂದರೆ ವ್ಯಕ್ತಿ ರೂಪದ ಗುರುವಲ್ಲ, ಮನಸ್ಸಿನ ರೂಪದ ಗುರು ಎಂದು ವಿವರಿಸಿದ ಅವರು, ದ್ವೈತ ಅದ್ವೈತವನ್ನು ನಿರಾಕರಿಸಿ ಬಯಲನ್ನು ಒಪ್ಪಿಕೊಂಡರು, ವೇದಶಾಸಗಳ ಪ್ರಮಾಣ ನಿರಾಕರಿಸಿದರೆಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಪ್ರೊ.ಮುನಿರತ್ನಪ್ಪ ಮಾತನಾಡಿ, ಪ್ರಧಾನ ಪರಂಪರೆಗಿಂತ ಮಿಗಿಲಾದ ದೇಶೀಯ eನ ಪರಂಪರೆಯನ್ನು ಎಚ್ಚರಿಕೆಯ ಮೂಲಕ ಅಲ್ಲಮ ಕಟ್ಟಿಕೊಟ್ಟಿದ್ದಾರೆ, ಕರ್ನಾಟಕದ ಗುರು ಪರಂಪರೆಯ ಮೊಟ್ಟ ಮೊದಲ ಪ್ರತಿನಿಽ ಅಲ್ಲಮ, ಬಸವಣ್ಣ ಭಕ್ತಿ ಮೂಲಕ ಸಾಧನೆ ಮಾಡಿದರೆ, ಅಲ್ಲಮ ಜ್ಞಾನ ಮತ್ತು ಯೋಗದ ಮೂಲಕ ಸಾಧನೆ ಮಾಡಿದರೆಂದು ವಿವರಿಸಿ, ರೂಢಿಗತ ಸಿದ್ಧ ಮಾದರಿಗಳನ್ನು ಮುರಿದು ಮಾಡಿದ್ದು ಅಲ್ಲಮ ಎಂದರು.
ಕಾರ್ಯಕ್ರಮದಲ್ಲಿ ಓದುಗ ಮತ್ತು ಉಪನ್ಯಾಸಕ ನಡುವೆ ಸಂವಾದವು ನಡೆಯಿತು.