PLACE YOUR AD HERE AT LOWEST PRICE
ಸಮುದಾಯ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸಕ್ಕೆ ಯಾರೇ ಷಡ್ಯಂತರ ರೂಪಿಸಿದರೂ, ರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ದಿ ಸಂಘ (ರಿ) ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಶ್ರೀ ರೇಣುಕಾ ಯಲ್ಲಮ್ಮ ಬಳಗದ ಜಿಲ್ಲಾಧ್ಯಕ್ಷ ಬಂಡೂರು ನಾರಾಯಣಸ್ವಾಮಿ ಆಗ್ರಹಿಸಿದರು.
ನಗರದ ಹೊರವಲಯದಲ್ಲಿರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಬುಧವಾರ ಬೇಟಿ ನೀಡಿ, ಯಲ್ಲಮ್ಮ ಬಳಗದ ಯುವ ನಾಯಕ, ದಲಿತ ಹೋರಾಟಗಾರ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸoದೇಶ್, ಆತ್ಮಹತ್ಯೆಗೆ ಪ್ರಯತ್ನಪಟ್ಟು ಇಲ್ಲಿನ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ದಾಖಲಾಗಿದ್ದು, ಅವರ ಆರೋಗ್ಯ ವಿಚಾರಣೆಗಾಗಿ ರೇಣುಕಾ ಯಲ್ಲಮ್ಮ ಬಳಗದ ಜಿಲ್ಲಾ ಕಾರ್ಯಕಾರಣಿ ಸದಸ್ಯರು ಬೇಟಿ ನೀಡಿ ನೈತಿಕ ಧೈರ್ಯ ತುಂಬಿದರಲ್ಲದೆ, ಸಂದೇಶ್ ಆತ್ಮಹತ್ಯೆಗೆ ಪ್ರೇರಣೆಯಾಗಿರುವ ಯಾರೇ ಇರಲಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಸಮಾಜಸೇವೆ ಮಾಡುವವರಿಗೆ ಸವಾಲುಗಳು ಎದುರಾಗುವುದು ಸಹಜ, ಇದಕ್ಕೆಲ್ಲಾ ದೃತಿಗೆಡದೆ ಸಮಾಜದ ಏಳಿಗೆಗಾಗಿ ಹೋರಾಟ ಮಾಡುವುದನ್ನು ಮುಂದುವರೆಸಬೇಕು, ನಮ್ಮನ್ನು ನಂಬಿದ ಸಮುದಾಯಕ್ಕೆ ಧೈರ್ಯವನ್ನು ತುಂಬಬೇಕೇ ಹೊರತು ಆತ್ಮಹತ್ಯೆಗೆ ಯತ್ನಿಸಬಾರದು ಎಂದು ಕಿವಿಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವುದಲ್ಲದೆ, ಅದನ್ನು ಪ್ರಶ್ನಿಸುವ ಸಮುದಾಯ ಮುಖಂಡರನ್ನು ಗುರಿಯಾಗಿಸಿಕೊಂಡು, ಕಾನೂನು ತೊಡಕುಗಳಲ್ಲಿ ಸಿಕ್ಕಿಸುವ ತಂತ್ರಗಾರಿಕೆಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿರುವುದು ಕಂಡು ಬರುತ್ತಿದೆ. ರೇಣುಕಾ ಯಲ್ಲಮ್ಮ ಬಳಗ ಯುವ ಜನತೆಯಲ್ಲಿ ಸಂವಿಧಾನ ಜ್ಞಾನ ಹಾಗೂ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕುತಂತ್ರದಿoದ ಸಮುದಾಯ ನಾಯಕರನ್ನು ಬಲಿತೆಗೆದುಕೊಳ್ಳಲು ಪ್ರಯತ್ನಿಸುವವರಿಗೆ ಕಾನೂನು ಪಾಠ ಕಲಿಸಲೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬೆಳ್ಳಾರಪ್ಪಾ, ಜಿಲ್ಲಾ ಖಜಾಂಚಿ ವೆಂಕಟರಾಮಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಕದಂಬ ಸೋಮಶೇಖರ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಅನಿಲ್ಕುಮಾರ್ ಅಯ್ಯಾ, ತಾಲ್ಲೂಕು ಅಧ್ಯಕ್ಷ ಕೊಡಿಯಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ.ವೆಂಕಟೇಶಯ್ಯ, ವಿ.ಕೆ.ರಾಜೇಶ್, ಶಿವಣ್ಣ, ನಾರಾಯಣಸ್ವಾಮಿ, ಸುರೇಶ್ ಮುಂತಾದವರು ಇದ್ದರು.