• Sun. Apr 28th, 2024

*ಜೆಡಿಎಸ್ ಪಕ್ಷಕ್ಕೆ ವಿಶೇಷ ಚೇತನ ವ್ಯಕ್ತಿಯಿಂದ ವಿಶೇಷ ಬೆಂಬಲ.*

PLACE YOUR AD HERE AT LOWEST PRICE

ಬಂಗಾರಪೇಟೆ ಪಟ್ಟಣದ ಸೇಟ್ ಕಾಂಪೌಂಡ್ ಬಡಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ ರವರು ಮನೆ ಮನೆಗೆ ಪಂಚರತ್ನ ಯೋಜನೆ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ವೇಳೆ ಸೇಟ್ ಕಾಂಪೌಂಡ್ ಬಡಾವಣೆಯ ನಿವಾಸಿ ಮಹಮದ್ ಹುಸೇನ್ ಎಂಬ ವಿಶೇಷ ಚೇತನ ವ್ಯಕ್ತಿ ಸ್ವಯಂ ಪ್ರೇರಿತರಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಣೆ ಮಾಡಿ ನಂತರ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ವೇಳೆ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರ‌ ಆಡಳಿತಾವಧಿಯಲ್ಲಿ ನಮ್ಮ ವಿಕಲಚೇತನರ‌ ಭವಿಷ್ಯಕ್ಕಾಗಿ ವಿಶೇಷ ಕಾಳಜಿ ವಹಿಸಿದ್ದು ನಮ್ಮಂತಹ ಸಾವಿರಾರು ಜನರ ಬದುಕಿಗೆ ಬೆಳಕಾಗಿದ್ದಾರೆ. ಆದ್ದರಿಂದ ಅವರ ಋಣ ತೀರಿಸುವ ಸಲುವಾಗಿ ನಮ್ಮ ಹಿರಿಯರಾದ ಸಾಗರ್ ಅಸ್ಲಾಂ, ಸಿರಾಜ್ ಅಹಮದ್, ರವರ ಮುಖಾಂತರವಾಗಿ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ ಹಾಗೂ ಅಧ್ಯಕ್ಷರಾದ ಮುನಿರಾಜು ರವರ‌ ಸಮ್ಮುಖದಲ್ಲಿ ನಾನು ಮತ್ತು ನನ್ನ ಸ್ನೇಹಿತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ, ಅಧ್ಯಕ್ಷರಾದ ಮುನಿರಾಜು, ಉಪಾಧ್ಯಕ್ಷ ಕೀಲುಕೊಪ್ಪ ಯಲ್ಲಪ್ಪ, ಪುರಸಭಾ ಸದಸ್ಯರು ವೆನ್ನೆಲಾ ಗಣೇಶ್, ಮುಖಂಡರಾದ ಸಾಗರ್ ಅಸ್ಲಾಂ, ಸಿರಾಜ್ ಅಹಮದ್, ಇಲಿಯಾಸ್, ನಹೀಂ ಪಾಷಾ, ಇರಗಸಂದ್ರ ವಿಶ್ವನಾಥ್, ಶ್ರೀರಾಮ್, ಆಕಾಶ್ ಗೌಡ, ಜೀವಿತೇಶ್, ಮೋಹನ್ ಗೌಡ, ತಮಿಳರಸನ್ ಕೃಷ್ಣಮೂರ್ತಿ ಗಣೇಶ್ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!