• Mon. May 6th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಪಟ್ಟಣದ ತಾಲ್ಲೂಕು ಕಛೇರಿಯ ಭೀಮ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಬಾವಿ ಸಭೆಯಲ್ಲಿ ಬಾಬು ಜಗಜೀವನ್‍ರಾಮ್ ಹಾಗೂ ಡಾ.ಅಂಬೇಡ್ಕರ್‍ರವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತಾಲ್ಲೂಕು ಆಡಳಿತ ಒಪ್ಪದ ಕಾರಣ ಸಭೆಯನ್ನು ದಲಿತ ಸಂಘಟನೆಗಳು ಬಹಿಷ್ಕರಿಸಿದ ಘಟನೆ ನಡೆಯಿತು.

ಸಭೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರನಾ ಸಮಿತಿ ಅದ್ಯಕ್ಷರು ಹಾಗೂ ತಹಶಿಲ್ದಾರರಾದ ರಶ್ಮಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‍ರಾಮ್ರ ಜಯಂತಿಯನ್ನು ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಸಾಂಕೇತಿಕವಾಗಿ ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ತಾಲ್ಲೂಕು ಕಛೇರಿಯಲ್ಲಿ ಪುಷ್ಪ ನಮನ ಸಲ್ಲಿಸಿ, ಗೌರವ ಸಲ್ಲಿಸುವ ಮುಖಾಂತರ ಜಯಂತಿಯನ್ನು ಆಚರಿಸಲಾಗುವುದು.

ಈ ಸಭೆಗೆ ಸರ್ಕಾರಿ ಅಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ ದಲಿತ ಸಂಘಟನೆಗಳ ಮುಖಂಡರು ಕೇಳಿದ ಪ್ರಶ್ನೆಗೆ ಉತ್ತರಿಸಿದ ತಹಶಿಲ್ದಾರರು, ಅಧಿಕಾರಿಗಳು ಚುನಾವಣೆ ಕೆಲಸದ ನಿಮಿತ್ತ ಹೊರಗೆ ಹೋಗಿರುವುದರಿಂದ ತಾವುಗಳು ಸಹಕರಿಸಬೇಕು. ಇದು ನೀತಿಸಂಹಿತೆ ಪಾಲನೆಯಾಗಬೇಕೆಂದರು.

ಈ ವೇಳೆ ದಲಿತ ಸಂಘಟನೆಗಳ ಮುಖಂಡರು ಮಾತನಾಡಿ, ನೀತಿ ಸಂಹಿತೆಯ ಮಾನದಂಡಗಳನ್ನು ಸಾರ್ವಜನಿಕವಾಗಿ ತಿಳಿಸಿಬೇಕು. ಯಾವುದೇ ರಾಷ್ಟ್ರ ನಾಯಕರ ಜಯಂತಿಯನ್ನು ಅದ್ದೂರಿಯಾಗಿ ಮಾಡಬಾರದೆಂದು ಚುನಾವಣಾ ನೀತಿ ಸಂಹಿತೆಯಲ್ಲಿ ಇದಿಯೇ..?

ನೀತಿ ಸಂಹಿತೆ ಮೂಲ ಅಜೆಂಡಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವೇದಿಕೆಯನ್ನು ರಾಜಕೀಯ ವೇದಿಕೆಯನ್ನಾಗಿ ಪರಿವರ್ತನೆ ಮಾಡಬಾರದು. ರಾಜಕೀಯ ಘೋಷಣೆಗಳನ್ನು ಕೂಗಬಾರದು., ರಾಜಕೀಯವಾಗಿ ಮತಯಾಚನೆ ಮಾಡಬಾರದು. ರಾಜಕೀಯ ಬಾವುಟಗಳನ್ನು ಬಳಸಬಾರದು ಎಂದುರುತ್ತದೆ. ರಾಷ್ಟ್ರ ನಾಯಕರ ಜಯಂತಿಗಳನ್ನು ಅದ್ದೂರಿ ಆಚರಣೆ ಮಾಡಬಾರದೆಂಬ ಉಲ್ಲೇಖ ಎಲ್ಲೂ ಸಹ ಇರುವುದಿಲ್ಲ.

ಇದಕ್ಕೆ ಪ್ರತಿಕ್ರಿಯಿಸಿದ ತಹಶಿಲ್ದಾರರು ನಾನು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ತದನಂತರ ನಿಮಗೆ ತಿಳಿಸುತ್ತೇನೆ ಎಂದು ಹೇಳಿದ್ದಕ್ಕೆ, ಮುಖಂಡರು ಸಭೆಯನ್ನು ಬಹಿಷ್ಕರಿಸಿ  ತಾಲ್ಲೂಕು ಕಛೇರಿ ಮುಂಭಾಗ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.  ತಾಲ್ಲೂಕು ಆಡಳಿತವನ್ನು ಹೊರತುಪಡಿಸಿ, ದಲಿತ ಸಂಘಟನೆಗಳ ಮುಖಂಡರು ತಾವೇ ಜಯಂತಿಯನ್ನು ಆಚರಣೆ ಮಾಡುವುದಾಗಿ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದರು.

ಸಭೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿಗಳು ಹಾಗೂ ಸಮಾಜ ಕಲ್ಯಾಣ  ಇಲಾಖೆ ಸಹಾಯಕ ನಿರ್ದೇಶಕರಾದ ಅಂಜಲಿದೇವಿ ತಾಪಂ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ, ಮುಖ್ಯಾಧಿಕಾರಿ ಚಲಪತಿ, ಮುಖಂಡರಾದ ಹುಣಸನಹಳ್ಳಿ ವೆಂಕಟೇಶ್, ಸೂಲಿಕುಂಟೆ ರಮೇಶ್, ಸೂಲಿಕುಂಟೆ ಆನಂದ್, ಕೆ.ಮದಿವಣ್ಣನ್, ಕದಿರೇನಹಳ್ಳಿ ಕುಮಾರ್, ಕಾರಬೆಲೆ ವೆಂಕಟೇಶ್, ಹುಳದೇನಹಳ್ಳಿ ವೆಂಕಟೇಶ್, ಹಿರೇಕರಪನಹಳ್ಳಿ ಮುನಿರಾಜು, ಸಿದ್ದನಹಳ್ಳಿ ಯಲ್ಲಪ್ಪ, ಹಿರೇಕರಪನಹಳ್ಳಿ ಕಲಾವಿದ ಯಲ್ಲಪ್ಪ, ಮಹದೇವಪುರ ವೆಂಕಟೇಶ್, ರವಿಬಾಬು, ಸಾಕಪ್ಪ, ಶಾಂತಮ್ಮ, ಹಿರೇಕರಪನಹಳ್ಳಿ ರಾಮಣ್ಣ, ವಲಗಮಾದಿ ಲಕ್ಷ್ಮಮ್ಮ, ಮಾರುತಿ ಪ್ರಸಾದ್ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!