• Sun. Apr 28th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಸಾವಿರಾರು ಕಾರ್ಯಕರ್ತರೊಂದೊಗೆ ಪಟ್ಟಣದಲ್ಲಿ ರೋಡ್ ಶೋ ನಡೆಸಿ ನಂತರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಅವರು ಮಾತನಾಡಿ, ಬಿಜೆಪಿ ಟಿಕೆಟ್ ಘೋಷಣೆ ತಡವಾಗಿದ್ದರಿಂದ ವಿರೋಧ ಪಕ್ಷಗಳವರು ಬಿಜೆಪಿ ಪ್ರಭಾವ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದರು.

ಅವರಿಗೆಲ್ಲಾ ಇಂದು ಉತ್ತರ ಸಿಕ್ಕಿದೆ. ಪಟ್ಟಣದ ಸಂದುಗೊಂದುಗಳಲ್ಲೂ ಬಿಜೆಪಿ ಕಾರ್ಯಕರ್ತರೆ. ಇಷ್ಟೊಂದು ಜನಸಂದಣಿಯನ್ನು ನಾನು ಎಂದೂ ನೋಡಿರಲಿಲ್ಲ ಎಂದರು.

ಚುನಾವಣಾ ಕಾವು ಎಂದರೇನು ಎಂಬುದನ್ನು ಕಾಂಗ್ರೇಸ್ ಅಭ್ಯರ್ಥಿಗೆ ತೋರಿಸುತ್ತೇವೆ. ಬಿಜೆಪಿ ಶಕ್ತಿ ರೈತ,ಯುವಜನ, ದಲಿತ, ಮಹಿಳೆ ಸೇರಿದಂತೆ ಎಲ್ಲರ ಮನದಲ್ಲಿದೆ ಎಂದರು.

ಅದು ಮತಗಳಾಗಿ ಪರಿವರ್ತನೆಯಾಗಿ ಮೇ 10ರಂದು ಬಿಜೆಪಿಗೆ ಬರಲಿದ್ದು, ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಪಕ್ಷದ ಅದ್ಯಕ್ಷ ನಾಗೇಶ್, ಮುಖಂಡರಾದ ಕೆ.ಚಂದ್ರಾರಡಡ್ಡಿ, ಬಿ.ವಿ.ಮಹೇಶ್, ವಿ.ಶೇಷು, ಪಲ್ಲವಿ ಮಣಿ, ಒಕ್ಕಲಿಗರ ಸಂಘದ ಅದ್ಯಕ್ಷ ಶಿವಕುಮಾರ್, ಹೊಸರಾಯಪ್ಪ, ಬಿ.ಸಿ.ಶ್ರೀನಿವಾಸಮೂರ್ತಿ, ಮಾರ್ಕಂಡೇಗೌಡ, ಕಪಾಲಿ ಶಂಕರ್, ಶಶಿ, ಬಿ.ಪಿ.ಮಹೇಶ್, ಅಮರಾವತಿನಗರ ಮಂಜುನಾಥ್, ಚಲಪತಿ, ಪ್ರಸನ್ನ, ವಿನೋದ್ ಕುಮಾರ್.ಸಿ, ಅಮರೇಶ್, ಬಿಂದು ಮಾಧವ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!