PLACE YOUR AD HERE AT LOWEST PRICE
ಬಂಗಾರಪೇಟೆ:ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಸಾವಿರಾರು ಕಾರ್ಯಕರ್ತರೊಂದೊಗೆ ಪಟ್ಟಣದಲ್ಲಿ ರೋಡ್ ಶೋ ನಡೆಸಿ ನಂತರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಅವರು ಮಾತನಾಡಿ, ಬಿಜೆಪಿ ಟಿಕೆಟ್ ಘೋಷಣೆ ತಡವಾಗಿದ್ದರಿಂದ ವಿರೋಧ ಪಕ್ಷಗಳವರು ಬಿಜೆಪಿ ಪ್ರಭಾವ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದರು.
ಅವರಿಗೆಲ್ಲಾ ಇಂದು ಉತ್ತರ ಸಿಕ್ಕಿದೆ. ಪಟ್ಟಣದ ಸಂದುಗೊಂದುಗಳಲ್ಲೂ ಬಿಜೆಪಿ ಕಾರ್ಯಕರ್ತರೆ. ಇಷ್ಟೊಂದು ಜನಸಂದಣಿಯನ್ನು ನಾನು ಎಂದೂ ನೋಡಿರಲಿಲ್ಲ ಎಂದರು.
ಚುನಾವಣಾ ಕಾವು ಎಂದರೇನು ಎಂಬುದನ್ನು ಕಾಂಗ್ರೇಸ್ ಅಭ್ಯರ್ಥಿಗೆ ತೋರಿಸುತ್ತೇವೆ. ಬಿಜೆಪಿ ಶಕ್ತಿ ರೈತ,ಯುವಜನ, ದಲಿತ, ಮಹಿಳೆ ಸೇರಿದಂತೆ ಎಲ್ಲರ ಮನದಲ್ಲಿದೆ ಎಂದರು.
ಅದು ಮತಗಳಾಗಿ ಪರಿವರ್ತನೆಯಾಗಿ ಮೇ 10ರಂದು ಬಿಜೆಪಿಗೆ ಬರಲಿದ್ದು, ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಪಕ್ಷದ ಅದ್ಯಕ್ಷ ನಾಗೇಶ್, ಮುಖಂಡರಾದ ಕೆ.ಚಂದ್ರಾರಡಡ್ಡಿ, ಬಿ.ವಿ.ಮಹೇಶ್, ವಿ.ಶೇಷು, ಪಲ್ಲವಿ ಮಣಿ, ಒಕ್ಕಲಿಗರ ಸಂಘದ ಅದ್ಯಕ್ಷ ಶಿವಕುಮಾರ್, ಹೊಸರಾಯಪ್ಪ, ಬಿ.ಸಿ.ಶ್ರೀನಿವಾಸಮೂರ್ತಿ, ಮಾರ್ಕಂಡೇಗೌಡ, ಕಪಾಲಿ ಶಂಕರ್, ಶಶಿ, ಬಿ.ಪಿ.ಮಹೇಶ್, ಅಮರಾವತಿನಗರ ಮಂಜುನಾಥ್, ಚಲಪತಿ, ಪ್ರಸನ್ನ, ವಿನೋದ್ ಕುಮಾರ್.ಸಿ, ಅಮರೇಶ್, ಬಿಂದು ಮಾಧವ ಮೊದಲಾದವರಿದ್ದರು.