PLACE YOUR AD HERE AT LOWEST PRICE
ತೆಲುಗಿನ ಖ್ಯಾತ ಚಿತ್ರನಟ ನಂದಮೂರಿ ಬಾಲಕೃಷ್ಣ ಅವರ ೬೪ನೇ ವರ್ಷದ ಹುಟ್ಟುಹಬ್ಬವನ್ನು ಕೋಲಾರ ನಗರದ ಕಿಲಾರಿಪೇಟೆಯಲ್ಲಿ ಅವರ ಅಭಿಮಾನಿಗಳು ಭಾನುವಾರ ರಾತ್ರಿ ಕೇಕ್ ಕತ್ತರಿಸಿ ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿಗಳು, ಖ್ಯಾತ ನಟ ಹಾಗೂ ಆಂಧ್ರದ ಮಾಜಿ ಮುಖ್ಯಮಂತ್ರಿ ಎಂ.ಟಿ.ರಾಮರಾವ್ ಅವರ ಪುತ್ರರಾಗಿರುವ ಬಾಲಕೃಷ್ಣ ತೆಲುಗು ಚಿತ್ರ ಪ್ರೇಮಿಗಳ ಆರಾಧ್ಯದೈವವಾಗಿದ್ದು, ಅವರ ನಟನೆ, ಡೈಲಾಗ್ಗಳಿಗೆ ಕರ್ನಾಟಕದ ಅದರಲ್ಲೂ ಗಡಿ ಜಿಲ್ಲೆಯಾದ ಕೋಲಾರದಲ್ಲೂ ಅಪಾರ ಅಭಿಮಾನಿಗಳು ಮನಸೋತಿದ್ದಾರೆ ಎಂದು ತಿಳಿಸಿದರು.
ನಂದಮೂರಿ ಬಾಲಯ್ಯ ಎಂದೇ ಕರೆಯಲ್ಪಡುವ ಬಾಲಕೃಷ್ಣ ತೆಲುಗು ಚಲನಚಿತ್ರ ಕ್ಷೇತ್ರದಲ್ಲಿ ತಮ್ಮದೇ ಆದ ಅಪರೂಪದ ಸ್ಥಾನ ಗಳಿಸಿದ್ದು, ಅವರು ನೂರುವರ್ಷ ಇದೇ ಮಾದರಿಯಲ್ಲಿ ತಮ್ಮ ನಟನೆಯ ಮೂಲಕ ಜನರನ್ನು ರಂಜಿಸುತ್ತಾ ಬಾಳಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಕಿಲಾರಿಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಾಲಕೃಷ್ಣ ಅವರಿಗೆ ಉತ್ತಮ ಆರೋಗ್ಯ ನೀಡಲು ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಕೃಷ್ಣಮೂರ್ತಿ,ಕ್ಯಾಪ್ಟನ್ ಮಂಜುನಾಥ್,ತೇಜಸ್,ಗಣೇಶ್ ಮಣಿ ಮತ್ತಿತರರು ಪಾಲ್ಗೊಂಡಿದ್ದರು.