PLACE YOUR AD HERE AT LOWEST PRICE
ಕೋಲಾರ ತಾಲೂಕಿನ ಮುದುವಾಡಿ ಕೆರೆಯಲ್ಲಿ ಕಾಡುಪ್ರಾಣಿಗಳಿಗಾಗಿ ಅಕ್ರಮವಾಗಿ ಇಟ್ಟಿದ್ದ ಸಿಡಿಮದ್ದು ತಿಂದು ಹಸು ಸಾವನ್ನಪ್ಪಿದ್ದು, ಇದಕ್ಕೆ ಕಾರಣರಾದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಹಸು ಕಳೆದುಕೊಂಡ ರೈತರಿಗೆ ಪರಿಹಾರ ಕೊಡುವಂತೆ ಕೆ.ಪಿ.ಆರ್.ಎಸ್ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಒತ್ತಾಯಿಸಿದ್ದಾರೆ.
ಮುದುವಾಡಿ ಕೆರೆಯಲ್ಲಿ ಸುತ್ತಮುತ್ತಲದ ಗ್ರಾಮದ ರೈತರು ಸಾರ್ವಜನಿಕರು ಕುರಿ ಮೇಕೆ ಮತ್ತು ಹಸುಗಳನ್ನು ಮೇಯಿಸಲು ಪ್ರತಿನಿತ್ಯ ಕೆರೆ ಹೋಗುತ್ತಿದ್ದು ಭಾನುವಾರ ತುರಾಂಡಹಳ್ಳಿ ಗ್ರಾಮದ ಟಿ.ಎ ನಾಗರಾಜ್ ಮುದುವಾಡಿ ಕೆರೆಗೆ ಹೋಗಿದ್ದು ಕಾಡುಪ್ರಾಣಿಗಳನ್ನು ಹಿಡಿಯಲು ಅಕ್ರಮವಾಗಿ ಇಟ್ಟಿದ್ದ ಸಿಡಿಮದ್ದನ್ನು ತಿಂದು ಹಸು ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಕೊನೆಗೆ ಸಾವನ್ನಪ್ಪಿದೆ,
ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಇಂತಹ ಅಕ್ರಮ ಸಿಡಿಮದ್ದು ಇಟ್ಟವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಜೊತೆಗೆ ಹಸು ಕಳೆದುಕೊಂಡ ರೈತ ನಾಗರಾಜ್ ಅವರಿಗೆ ಪರಿಹಾರ ನೀಡುವಂತೆ ಟಿ.ಎಂ ವೆಂಕಟೇಶ್ ಒತ್ತಾಯಿಸಿದ್ದಾರೆ.