PLACE YOUR AD HERE AT LOWEST PRICE
ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ, ನಮ್ಮ ಕೋಲಾರ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿ ವೆಂಕಟರಾಜು ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಂದರ್ಭದಲ್ಲಿ ನಮ್ಮ ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ ಗೌಡ ಮಾತನಾಡಿ, ರಾಜಕೀಯ ನಾಯಕರುಗಳ ಅಧಿಕಾರವನ್ನು ಬಳಸಿಕೊಂಡು, ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗ ಪಡೆದುಕೊಂಡಿದ್ದಾರೆ. ಈ ಕೂಡಲೇ ಇವುಗಳಿಗೆ ಯಾವುದೇ ರೀತಿ ಆದ್ಯತೆಯನ್ನು ನೀಡದಂತೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಸರ್ಕಾರಿ ಮತ್ತು ಅನುದಾನಿತ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಶಿಕ್ಷಕರು ರಾಜಕೀಯ ನಾಯಕರುಗಳ ಜೊತೆ ಸೇರಿಕೊಂಡು ಶಾಲಾ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಹಾಗೂ ಕೆಲವು ಶಿಕ್ಷಕರು ಬಡ್ಡಿ ವ್ಯಾಪಾರದಲ್ಲಿ ತೊಡಗಿರುವ ಶಿಕ್ಷಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತಾಯಿಸಿದರು. ಜಿಲ್ಲೆಯ ಸುಮಾರು ಶಾಲೆಗಳು ಅನಧಿಕೃತವಾಗಿ ನಡೆಯುತ್ತಿವೆ ಅವುಗಳು ಬೇನಾಮಿ ಹೆಸರಿನಲ್ಲಿವೆ ಶಾಲಾ ವಿಳಾಸ ಒಂದು ಕಡೆ ಆದರೆ ಶಾಲೆ ನಡೆಸುವುದು ಮತ್ತೊಂದು ಕಡೆ ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಯಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಇದರ ಬಗ್ಗೆ ಸಮಗ್ರ ತನಿಕೆಯಾಗಬೇಕೆಂದರು.
ನಿವೃತ್ತಿ ಹೊಂದಿರುವ ಶಿಕ್ಷಕರು ಹಾಗೂ ಕೆಲವು ಇಲಾಖೆ ಅಧಿಕಾರಿಗಳು ತಾಲೂಕು ಕಚೇರಿಯ ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿ ಬಳಿ ದಾಖಲೆಗಳನ್ನು ಮಾಡಿಕೊಡುವ ನೆಪದಲ್ಲಿ ಅಮಾಯಕರು ಹಾಗೂ ಸಾರ್ವಜನಿಕರಿಂದ ಹಣ ಕೇಳುತ್ತಿದ್ದಾರೆ ಇಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದರಲ್ಲದೆ ಖಾಸಗಿ ಶಿಕ್ಷಣ ಸಮಸ್ಯೆಗಳ ಶಾಲಾ ವಾಹನಗಳು ಅಸುರಕ್ಷತೆಯಿಂದ ಕುಡಿದು ಇದರಿಂದ ಮಕ್ಕಳ ಸುರಕ್ಷತೆ ಇರುವುದಿಲ್ಲ ಇದರ ಬಗ್ಗೆ ಕ್ರಮ ವಹಿಸಬೇಕೆಂದರು.
ಕೆಲವು ವ್ಯಕ್ತಿಗಳು ವಿವಿಧ ಸರ್ಕಾರದ ಯೋಜನೆಗಳನ್ನು ಮಾಡಿಕೊಡುವುದಾಗಿ ಅವರಿಂದ ದಾಖಲೆಗಳನ್ನು ಪಡೆದು ಅದನ್ನು ಬೇರೆಯವರ ಹೆಸರಿನಲ್ಲಿ ಲಾಭ ಮಾಡಿಕೊಂಡು ಮೂಲ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಇನ್ನು ಕೋಲಾರ ತಾಲೂಕು ಕಚೇರಿಗಳು ಸುಮಾರು ೧೦ ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಈ ಕೊಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಮ್ಮ ಕೋಲಾರ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆಂಬೋಡಿ ಕೃಷ್ಣೇಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಕಾಮದೇನುಹಳ್ಳಿ ವೆಂಕಟಾಚಲಪತಿ, ವೆಂಕಟರಮಣಪ್ಪ, ಶ್ರೀಧರ್ ಆಂಜಿ ಇತರರು ಇದ್ದರು.