PLACE YOUR AD HERE AT LOWEST PRICE
ಕೋಲಾರ:ಈಗ ಹೊಸಬತ್ತದ ಕುಯ್ಲಿನ ಕಾಲ. ಹಳೆಬತ್ತ ನನ್ನ ಪಾಲಿಗೆ ಬಂದದ್ದು ರೈತಮಿತ್ರ ನಡಮಂತರಂ ಸೀನಪ್ಪನ ಹತ್ತಿರ ಇಟ್ಟಿದ್ದೆನು. ನಮ್ಮ ಮನೆಯಲ್ಲೂ ಬೆಳೆದ ಅಕ್ಕಿ ಮುಗಿದು ಹೋಗಿ ಈ ತಿಂಗಳು ಅಂಗಡಿ ಅಕ್ಕಿ ಖರೀದಿಸಿದ್ದೆವು. ಆದ್ದರಿಂದ ನಾನು ನಡಮಂತರಂ ಗ್ರಾಮದಲ್ಲಿ ವಾಸ್ತವ್ಯ ಇದ್ದು ಖಾಲಿ ಸಂಪ್ ಗೆ ನೀರು ತುಂಬಿಸುವುದು ಮತ್ತು ಬತ್ತ ಗಿರಣಿಗೆ ಹಾಕಿಸುವುದು ಕೆಲಸಗಳಿತ್ತು. ಬತ್ತವನ್ನು ಹೊಟ್ಟು ಸುಲಿದು ಕೊಡುವ ಜೀರೋ ಪಾಲಿಶ್ ಗಿರಣಿಗೆ ಖುದ್ದಾಗಿ ಹೋಗಿ ಹಾಕಿಸಬೇಕಿತ್ತು.
ವಿ.ಕೋಟೆಯಲ್ಲಿ ಎರಡು ರೀತಿಯ ರೈಸ್ ಮಿಲ್ ಗಳಿವೆ. ೧) ಜೀರೋ ಪಾಲಿಶ್. ೨) ಫುಲ್ ಪಾಲಿಶ್ . ಎರಡನೆ ಬಗೆಯಲ್ಲಿ ಅಕ್ಕಿ + ನುಚ್ಚು + ತೌಡು ಮೂರೂ ಸಿಗುತ್ತದೆ. ಪಶುಸಾಕಣೆ ರೈತರು ತೌಡು ತೆಗೆದುಕೊಂಡು ದುಡ್ಡು ಕಟ್ಟುತ್ತಾರೆ. ತೌಡು ಗಿರಣಿಯಲ್ಲೇ ಬಿಟ್ಟರೆ ಪಾಲಿಶ್ ಉಚಿತ. ಮೊದಲನೇ ಬಗೆಯಲ್ಲಿ ಅಕ್ಕಿ + ನುಚ್ಚು ಮಾತ್ರ ಸಿಗುತ್ತದೆ. ಹೊಟ್ಟು ಪಶುಸೇವನೆಗೆ ಆಗುವುದಿಲ್ಲ. ಆದ್ದರಿಂದ ಹೊಟ್ಟನ್ನು ಗಿರಣಿಯವರೇ ಇಟ್ಟುಕೊಂಡು ಪಾಲಿಶ್ / ಚೀಲ ಉಚಿತ ಕೊಡುತ್ತಾರೆ.
ಇದೇ ಇಲ್ಲಿನ ವಿಶೇಷ. ರೈತರು ಬತ್ತವನ್ನು ಮಿಲ್ ಗೆ ತೆಗೆದುಕೊಂಡು ಹೋದರೆ, ಗಿರಣಿಯವರೇ 25 KG ಚೀಲಗಳಲ್ಲಿ ಅಕ್ಕಿಯನ್ನು ತೂಕ ಮಾಡಿ, ಬಾಯಿ ಹೊಲಿದು ಕೊಡುತ್ತಾರೆ. ಇದಕ್ಕಾಗಿ ಅವರು ಚಾರ್ಜ್ ಮಾಡುವುದಿಲ್ಲ. ಎಲ್ಲವೂ ಉಚಿತ ಸೇವೆ. ನಮ್ಮ ಗಿರಣಿ ಮಾಲೀಕರು “ಮುಂಚಿತವಾಗಿ ನಮಗೆ ಫೋನ್ ಮಾಡಿದರೆ, ನೀವು ಇರುವಲ್ಲಿಗೆ ನಮ್ಮದೇ ಬಂಡಿ ಉಚಿತವಾಗಿ ಕಳುಹಿಸುತ್ತೇವೆ” ಎನ್ನುತ್ತಾರೆ. ಇದಲ್ಲವೇ ರೈತಸ್ನೇಹಿ ರೈಸ್ ಮಿಲ್ ಗಳು. ಇಂಥ ರೈಸ್ ಮಿಲ್ ಗಳಿಗೆ ಜಿಂದಾಬಾದ್ !
ಪ್ರೊ:ನಂಗ್ಲಿ ಜಂಗ್ಲಿ: