PLACE YOUR AD HERE AT LOWEST PRICE
ಬಂಗಾರಪೇಟೆ;ಆಹಾರ ಇಲಾಖೆ ಜಿಲ್ಲಾ ಉಪ ನಿರ್ಧೇಶಕಿ ಶೃತಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಅಕ್ಕಿ, ರಾಗಿ, ಅವರೆ ಬೇಳೆ ಪತ್ತೆಯಾಗಿದೆ. ಪಟ್ಟಣದ ಕಾರಹಳ್ಳಿ ರಸ್ತೆಯಲ್ಲಿರುವ ನಾಗೇಸ್ ರೈಸ್ ಮಿಲ್ಲ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಈ ಅಕ್ರಮ ಬಯಲಿಗೆ ಬಂದಿದೆ.
ಖಚಿತ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳು ರೈಸ್ ಮಿಲ್ಲ್ ಮೇಲೆ ದಾಳಿ ನಡೆಸಿದಾಗ ಸುಮಾರು 130.17 ಕ್ವಿಂಟಾಲ್ ಅಕ್ಕಿ ಮೂಟೆಗಳು ಮತ್ತಿತರೆ ಆಹಾರ ಪದಾರ್ಥಗಳು ಪತ್ತಯಾಗಿದೆ.
ಅಕ್ಕಿ ನುಚ್ಚು, 30.50, ರಾಗಿ 10.5, ಗೋದಿ 25, ಬತ್ತ 51.25, ಫೀಡ್ಸ್ ಅಕ್ಕಿ ಮತ್ತು ತೌಡು 44.80, ಅವರೆಕಾಳು 168.60 ಸಿಕ್ಕಿದ್ದು ಅಶಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ಮತ್ತು ಆಂದ್ರ ಪ್ರದೇಶ ದಿಂದ ಖರೀದಿ ಮಾಡಿರುವ ಕಚುಬುಲಕ್ಕಿ 42.50 ಮೂಟೆ ಪತ್ತೆಯಾಗಿದೆ. ಸೊಸೈಟಿ ಅಕ್ಕಿಯೂ ಮೂಟೆಗಳಲ್ಲಿ ತುಂಬಿಸಿ ಇಟ್ಟಿರುವುದು ಇದೇ ಸಮಯದಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಸೊಸೈಟಿ ಅಕ್ಕಿಗೆ ಪಾಲಿಶ್ ಮಾಡಿ ಬ್ರಾಂಡ್ಗಳ ಹೆಸರಿನಲ್ಲಿ ಅಕ್ಕಿ ತುಂಬಿಸಿದ್ದ 25 ಕೆಜಿ ತೂಕದ ಹಲವು ಚೀಲಗಳು ಪತ್ತೆಗೊಂಡಿದೆ ಎನ್ನಲಾಗಿದೆ.
ಮಿಲ್ಲ್ ಮೇಲೆ ದಾಳಿ ನಡೆದ ವಿಷಯ ತಿಳಿದ ತಕ್ಷಣ ಸಹಾಯಕ ಕಮೀಷನರ್ ವೆಂಕಟಲಕ್ಷ್ಮಿ ಅವರೂ ಬೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳಾದ ಶೃತಿ ಮತ್ತು ವೆಂಕಟಲಕ್ಷ್ಮಿ ಅವರು ಮಿಲ್ಲ್ ಮಾಲಿಕರನ್ನ ಪ್ರಶ್ನೆ ಮಾಡಿದಾಗ ಎಲ್ಲದಕ್ಕೂ ಖರೀದಿ ಮಾಡಿರುವ ಬಿಲ್ಲ್ ಇದೆ ತಿಳಿಸಿದರೆಂದು ಹೇಳಲಾಗಿದೆ.
ಬೀಲ್ ಕೇಳಿದಾಗಿ ತೋರಿಸುವಲ್ಲಿ ಮಾಲೀಕರು ಹಿಂದೇಟು ಹಾಕಿದರೆಂದು ತಿಳಿದುಬಂದಿದೆ. ಇದರಿಂದ ಅಧಿಕಾರಿಗಳಿಗೆ ಮತ್ತಷ್ಟು ಅನುಮಾನ ವ್ಯಕ್ತವಾಗಿದ್ದು, ಈ ಘಟನೆ ಸಂಬಂಧವಾಗಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಮಿಲ್ಲ್ನಲ್ಲಿ ಪತ್ತೆಯಾಗಿರುವ ಅಕ್ಕಿ ಹಾಗು ಮತ್ತಿತ್ತರೆ ಪದಾರ್ಥಗಳ ಬಗ್ಗೆ ಜಿಲ್ಲಾಧಿಕಾರಿಗಳು ನೋಟಿಸ್ ನೀಡಿದ ನಂತರ, ಮಾಲೀಕರ ಉತ್ತರದ ಹಿನ್ನಲೆಯಲ್ಲಿ ಅಧಿಕಾರಿಗಳು ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ. ದಾಳೆ ವೇಳೆಯಲ್ಲಿ ಆಹಾರ ಇಲಾಖೆ ಡಿಡಿ ಶೃತಿ, ಎಸಿ ವೆಂಕಟಲಕ್ಷ್ಮಿ, ಆಹಾರ ನಿರೀಕ್ಷಕ ಗೋಪಾಲ್, ಸಾಮಾಜಿಕ ಕಾರ್ಯಕರ್ತೆ ಕೆರೆಕೋಡಿ ಮಂಜುಳ ಮತ್ತಿತ್ತರರು ಇದ್ದರು.