PLACE YOUR AD HERE AT LOWEST PRICE
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಂಘದ ಸ್ಥಾಪನೆ ಬಗ್ಗೆ ಇಂದು ನಗರದ ವಾರ್ತಾ ಭವನದ ಸಂಭಾಗಣದಲ್ಲಿ ಸಭೆ ಸೇರಿದ್ದ ವಿವಿಧ ಜಿಲ್ಲಾ ಪತ್ರಿಕೆಗಳ ಸಂಪಾದಕರು, ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಪತ್ರಿಕೆಗಳ ಹಲವಾರು ಸಮಸ್ಯೆಗಳನ್ನು ಚರ್ಚೆಸಿದ ನಂತರ ಸಂಘದ ಸ್ಥಾಪನೆಗೆ ಮುನ್ನುಡಿ ಬರೆದಿದ್ದು, ಸಂಘದ ಪ್ರವರ್ತಕರಾಗಿ ಹೆಚ್.ಎನ್.ಮುರಳಿಧರ್ರನ್ನು ಆಯ್ಕೆ ಮಾಡಲಾಯಿತು.
ಹಿರಿಯ ಪತ್ರಕರ್ತರು, ವಿಜಯಧ್ವನಿ ಪತ್ರಿಕೆಯ ಸಂಪಾದಕರಾದ ಅಬ್ಬಣಿ ಶಂಕರ್ ಮಾತನಾಡಿ, ವೃತ್ತ ಪತ್ರಿಕೆಗಳ ಮುದ್ರಣ ಮತ್ತು ಅವುಗಳ ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ಕಷ್ಟಕರವಾಗಿದ್ದು, ಸಂಪಾದಕರ ಸಂಘದ ಮೂಲಕ ಪತ್ರಿಕೆಗಳ ಉಳಿವಿಕೆಗೆ ಸಹಕಾರಿಯಾಗಲಿದ್ದು, ಆರಂಭದಲ್ಲಿ ಸಂಘವನ್ನು ಸಮರ್ಥವಾಗಿ ಮುನ್ನಡೆಸುವ ಜವಬ್ದಾರಿಯನ್ನು ಕೋಲಾರ ಧ್ವನಿ ಪತ್ರಿಕೆಯ ಹೆಚ್.ಎನ್. ಮುರಳೀಧರ್ ಅವರನ್ನು ಪ್ರವರ್ತಕರನ್ನಾಗಿ ಸೂಚಿಸಿದರು. ಇದಕ್ಕೆ ಸಭೆಯು ಸರ್ವಾನುಮತದಿಂದ ಒಪ್ಪಿಗೆ ನೀಡಿತು.
ಈ ಸಂದರ್ಭದಲ್ಲಿ ಕೋಲಾರಶಕ್ತಿ ಪತ್ರಿಕೆಯ ಸಂಪಾದಕಿ ಗೋಪಿಕಾ ಮಲ್ಲೇಶ್, ಕೋಲಾರ ಕುಸುಮ ಪತ್ರಿಕೆಯ ಸಂಪಾದಕ ಆರ್. ವೆಂಕಟೇಶ್ ಬಾಬಾ, ಕೋಲಾರ ಕಿರಣ ಪತ್ರಿಕೆಯ ಸಂಪಾದಕ ಚಾಂದ್ಪಾಷ, ದುನಿಯಾ ಪತ್ರಿಕೆಯ ಸಂಪಾದಕ ಮುನಿಯಪ್ಪ, ಕನ್ನಡತಿಲಕ ಪತ್ರಿಕೆಯ ಸಂಪಾದಕ ಕಲಾವಿದ ವಿಷ್ಣು, ಚುಂಬಕವಾಣಿ ಪತ್ರಿಕೆಯ ಸಂಪಾದಕ ಲಕ್ಷ್ಮಣ, ಗಡಿನಾಡು ಕೂಗು ಪತ್ರಿಕೆಯ ಸಂಪಾದಕ ಲಕ್ಷ್ಮಣ್ ಹಾಗೂ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.